ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಬ್ಯಾಂಕ್ ಮ್ಯಾನೇಜರ್ ಪರಾರಿ

By Suvarna Web DeskFirst Published Jan 16, 2017, 6:59 AM IST
Highlights

ಅಕ್ರಮ ಸಂಬಂಧ ಈಗಿನ ಟ್ರೆಂಡ್, ಅಕ್ರಮ ಸಂಬಂಧ ಇಟ್ಟುಕೊಳ್ಳೋಣ, ಮನೆಯಲ್ಲಿ‌ ಯಾರು ಇಲ್ಲದ ವೇಳೆ ಮನೆಗೆ ನನ್ನನ್ನು ಕರೆಸಿಕೊ,ಹಾಗೆ ಸಾಧ್ಯವಾಗದಿದ್ದರೆ ಲಾಡ್ಜ್‌ನಲ್ಲಿ ಇಬ್ಬರು ಸೇರೋಣ, ಎಂದು ಹೇಳಿ ಪ್ರತಿದಿನ ಹಿಂಸೆ ನೀಡುತ್ತಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. 

ಬೆಂಗಳೂರು (ಜ.16): ಬೆಂಗಳೂರಿನಲ್ಲಿ ಇನ್ನೊಂದು ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿದೆ. 

ಇಲ್ಲಿಯ ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬ್ಯಾಂಕೊಂದರಲ್ಲಿ ಮ್ಯಾನೇಜರ್ ಆಗಿರುವ  ಹನುಮಂತಪ್ಪ ಎಂಬಾತ ತನ್ನ ಶಾಖೆಯ ಮಹಿಳಾ ಸಿಬ್ಬಂದಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಅಕ್ರಮ ಸಂಬಂಧ ಈಗಿನ ಟ್ರೆಂಡ್, ಅಕ್ರಮ ಸಂಬಂಧ ಇಟ್ಟುಕೊಳ್ಳೋಣ, ಮನೆಯಲ್ಲಿ‌ ಯಾರು ಇಲ್ಲದ ವೇಳೆ ಮನೆಗೆ ನನ್ನನ್ನು ಕರೆಸಿಕೊ,ಹಾಗೆ ಸಾಧ್ಯವಾಗದಿದ್ದರೆ ಲಾಡ್ಜ್‌ನಲ್ಲಿ ಇಬ್ಬರು ಸೇರೋಣ, ಎಂದು ಹೇಳಿ ಪ್ರತಿದಿನ ಹಿಂಸೆ ನೀಡುತ್ತಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. 

ಶಂಕರಪುರ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಆರೋಪಿ ಮ್ಯಾನೇಜರ್ ಪರಾರಿ?

ಸುವರ್ಣ ನ್ಯೂಸ್ನಲ್ಲಿ ಸುದ್ದಿ ಬಿತ್ತರವಾದ ಬಳಿಕ ಆರೋಪಿ ಬ್ಯಾಂಕ್ ಮ್ಯಾನೇಜರ್ ಹನುಮಂತ ಪರಾರಿಯಾಗಿದ್ದಾನೆನ್ನಲಾಗಿದೆ.

ಪ್ರತಿದಿನ 10 ಗಂಟೆಗೆ ಬ್ಯಾಂಕಿಗೆ ಬರುತ್ತಿದ್ದ ಹನುಮಂತ ಇಂದು ರಜಾ ಹಾಕಿದಾರೆ ಎಂದು ಸಿಬ್ಬಂದಿ ಸಬೂಬು ನೀಡಿದ್ದಾರೆ.

click me!