ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಬ್ಯಾಂಕ್ ಮ್ಯಾನೇಜರ್ ಪರಾರಿ

Published : Jan 16, 2017, 06:59 AM ISTUpdated : Apr 11, 2018, 12:53 PM IST
ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಬ್ಯಾಂಕ್ ಮ್ಯಾನೇಜರ್ ಪರಾರಿ

ಸಾರಾಂಶ

ಅಕ್ರಮ ಸಂಬಂಧ ಈಗಿನ ಟ್ರೆಂಡ್, ಅಕ್ರಮ ಸಂಬಂಧ ಇಟ್ಟುಕೊಳ್ಳೋಣ, ಮನೆಯಲ್ಲಿ‌ ಯಾರು ಇಲ್ಲದ ವೇಳೆ ಮನೆಗೆ ನನ್ನನ್ನು ಕರೆಸಿಕೊ,ಹಾಗೆ ಸಾಧ್ಯವಾಗದಿದ್ದರೆ ಲಾಡ್ಜ್‌ನಲ್ಲಿ ಇಬ್ಬರು ಸೇರೋಣ, ಎಂದು ಹೇಳಿ ಪ್ರತಿದಿನ ಹಿಂಸೆ ನೀಡುತ್ತಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. 

ಬೆಂಗಳೂರು (ಜ.16): ಬೆಂಗಳೂರಿನಲ್ಲಿ ಇನ್ನೊಂದು ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿದೆ. 

ಇಲ್ಲಿಯ ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬ್ಯಾಂಕೊಂದರಲ್ಲಿ ಮ್ಯಾನೇಜರ್ ಆಗಿರುವ  ಹನುಮಂತಪ್ಪ ಎಂಬಾತ ತನ್ನ ಶಾಖೆಯ ಮಹಿಳಾ ಸಿಬ್ಬಂದಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಅಕ್ರಮ ಸಂಬಂಧ ಈಗಿನ ಟ್ರೆಂಡ್, ಅಕ್ರಮ ಸಂಬಂಧ ಇಟ್ಟುಕೊಳ್ಳೋಣ, ಮನೆಯಲ್ಲಿ‌ ಯಾರು ಇಲ್ಲದ ವೇಳೆ ಮನೆಗೆ ನನ್ನನ್ನು ಕರೆಸಿಕೊ,ಹಾಗೆ ಸಾಧ್ಯವಾಗದಿದ್ದರೆ ಲಾಡ್ಜ್‌ನಲ್ಲಿ ಇಬ್ಬರು ಸೇರೋಣ, ಎಂದು ಹೇಳಿ ಪ್ರತಿದಿನ ಹಿಂಸೆ ನೀಡುತ್ತಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. 

ಶಂಕರಪುರ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಆರೋಪಿ ಮ್ಯಾನೇಜರ್ ಪರಾರಿ?

ಸುವರ್ಣ ನ್ಯೂಸ್ನಲ್ಲಿ ಸುದ್ದಿ ಬಿತ್ತರವಾದ ಬಳಿಕ ಆರೋಪಿ ಬ್ಯಾಂಕ್ ಮ್ಯಾನೇಜರ್ ಹನುಮಂತ ಪರಾರಿಯಾಗಿದ್ದಾನೆನ್ನಲಾಗಿದೆ.

ಪ್ರತಿದಿನ 10 ಗಂಟೆಗೆ ಬ್ಯಾಂಕಿಗೆ ಬರುತ್ತಿದ್ದ ಹನುಮಂತ ಇಂದು ರಜಾ ಹಾಕಿದಾರೆ ಎಂದು ಸಿಬ್ಬಂದಿ ಸಬೂಬು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ