ಬೆಂಗಳೂರಲ್ಲಿ ಮತ್ತೆ ಗರಿಗೆದರುತ್ತಿದೆಯಾ ಭೂಗತ ಲೋಕ..? ಡೆಡ್ಲಿ ಸೋಮನ ಶಿಷ್ಯನ ಅಪರಾವತಾರ

Published : Aug 11, 2017, 01:10 AM ISTUpdated : Apr 11, 2018, 12:40 PM IST
ಬೆಂಗಳೂರಲ್ಲಿ ಮತ್ತೆ ಗರಿಗೆದರುತ್ತಿದೆಯಾ ಭೂಗತ ಲೋಕ..? ಡೆಡ್ಲಿ ಸೋಮನ ಶಿಷ್ಯನ ಅಪರಾವತಾರ

ಸಾರಾಂಶ

ಕಬ್ಬಡ್ಡಿ ಜಯರಾಮ್, ಸ್ವಾಮಿ ಎಂಬುವವರ ಜೊತೆ ಬಂದ ಕಾಲಪತ್ತರ್, ನಾಗರಾಜ್​ಗೆ ಹಲ್ಲೆ ನಡೆಸಿ, ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾನೆ

ಬೆಂಗಳೂರಿನ ಪಾತಕಲೋಕದ ಹಳೇ ಡಾನ್ ಡೆಡ್ಲಿ ಸೋಮನ ಶಿಷ್ಯ ಕಾಲಪತ್ತರ್ ಅಲಿಯಾಸ್ ಗಣೇಶ್ ಮತ್ತೆ ಬುಸುಗುಟ್ಟಿದ್ದಾನೆ. ನಿವೇಶನ ವಿವಾದವೊಂದಕ್ಕೆ ಸಂಬಂಧಿಸಿದ್ದಂತೆ ನಾಗರಾಜ್ ಎಂಬುವವರಿಗೆ ಕಾಲಪತ್ತರ್ ಜೀವ ಬೆದರಿಕೆ ಹಾಕಿದ್ದಾನೆ.

ಕೆಂಗೇರಿ ಮೂಲದ, ನಾಗರಾಜ್ ಎಂಬುವವರಿಗೆ ಸೇರಿದ ಸೈಟ್​ ಅನ್ನ ಕಡಿಮೆ ಬೆಲೆಗೆ ತನಗೆ ಮಾರಾಟ ಮಾಡಬೇಕು ಅಂತಾ ನಾಗರಾಜ್​ಗೆ ಬೆದರಿಕೆ ಹಾಕಿದ್ದಾನೆ. ಹಲವು ಬಾರಿ ಬೆದರಿಕೆ ಹಾಕಿದ್ದರೂ, ಬಗ್ಗದ ನಾಗರಾಜ್, ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ಹೇಳಿದಾಗ, ಕಾಲಪತ್ತರ್ ತನ್ನ ಹಳೇ ಖದರ್ ಪ್ರದರ್ಶಿಸಿದ್ದಾನೆ. ಕಬ್ಬಡ್ಡಿ ಜಯರಾಮ್, ಸ್ವಾಮಿ ಎಂಬುವವರ ಜೊತೆ ಬಂದ ಕಾಲಪತ್ತರ್, ನಾಗರಾಜ್​ಗೆ ಹಲ್ಲೆ ನಡೆಸಿ, ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾನೆ. ನಾಗರಾಜ್ ಕೆಂಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಜೀವ ಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಕೆಂಗೇರಿ ಪೊಲೀಸರು, ಕಾಲಪತ್ತರ್​ ನನ್ನ ಜೈಲಿಗೆ ಕಳಿಸಲು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ