
ಭುವನೇಶ್ವರ[ಜು.31]: ತಾಂಬೂಲ ಅಥವಾ ಎಲೆ-ಅಡಿಕೆ ಮೆಲ್ಲುವುದು ಭಾರತದಲ್ಲಿ ಸಾಮಾನ್ಯ ಚಟ. ಇದರ ಜತೆಗೆ ಗುಟ್ಕಾ ಮತ್ತು ತಂಬಾಕು ಕೂಡ ಸೇರಿಕೊಂಡಿದ್ದು, ಈ ಚಟ ಉಳ್ಳವರು ಎಲ್ಲೆಂದರಲ್ಲಿ ಉಗುಳಿ ಅಂದಗೆಡಿಸುವುದು ಸಾಮಾನ್ಯ ಎನ್ನುವಂತಾಗಿದೆ. ಇದು ಜಗತ್ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಅಂದಕ್ಕೂ ಸಂಚಕಾರ ತಂದಿದೆ.
ಅದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ ಇದೀಗ ಕ್ರಮಕ್ಕೆ ಮುಂದಾಗಿದ್ದು, ಬಾಯಿ ಸ್ವಚ್ಛವಾಗಿಟ್ಟುಕೊಂಡೇ ದೇವಸ್ಥಾನ ಪ್ರವೇಶಿಸಬೇಕು. ದೇವಸ್ಥಾನದ ಆವರಣದಕಲ್ಲಿ ಎಲೆ-ಅಡಿಕೆ, ಗುಟ್ಕಾ ಮತ್ತು ತಂಬಾಕು ಉಗುಳಿದ್ದ ಕಂಡು ಬಂದರೆ 500 ರೂ ದಂಡ ಫಿಕ್ಸ್.
ಈಗಾಗಲೇ ದೇವಸ್ಥಾನದ ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಆ.1ರಿಂದಲೇ ಎಲೆ-ಅಡಿಕೆ, ಗುಟ್ಕಾ ಮತ್ತು ತಂಬಾಕು ಹಾಕಿಕೊಂಡು ದೇವಸ್ಥಾನದ ಆವರಣ ಪ್ರವೇಶಕ್ಕೆ ನಿಷೇಧ ಹೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.