
ಬೆಂಗಳೂರು (ಅ.06): ನಟ ಪ್ರಕಾಶ್ ರೈಗೆ ಡಾ. ಶಿವರಾಂ ಕಾರಂತ್ ಪ್ರಶಸ್ತಿ ನೀಡುತ್ತಿರುವುದಕ್ಕೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ. ಸಂಘ ಪರಿವಾರ ಗೌರಿ ಹತ್ಯೆ ಮಾಡಿದೆ ಎಂದು ಪ್ರಕಾಶ್ ರೈ ಹೇಳಿಕೆ ಖಂಡನೀಯವಾಗಿದ್ದು, ಪ್ರಕಾಶ್ ರೈ ಕಾಂಗ್ರೆಸ್ ಏಜಂಟ್'ನಂತೆ ವರ್ತನೆ ಮಾಡಿ, ಅನಗತ್ಯವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.
ಪ್ರಚಾರದ ಗೀಳಿಗಾಗಿ ಪ್ರಕಾಶ್ ರೈ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ. ಕಮ್ಯೂನಿಷ್ಟ್ ಪಕ್ಷದ ವೇದಿಕೆಗಳಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ್ದು, ಡಾ. ಶಿವರಾಂ ಕಾರಂತರ ಪ್ರಶಸ್ತಿ ಪಡೆಯುವ ಅರ್ಹತೆಯನ್ನ ಪ್ರಕಾಶ್ ರೈ ಹೊಂದಿಲ್ಲ. ಆದ್ದರಿಂದ ಕಾರಂತ ಪ್ರಶಸ್ತಿಯನ್ನು ಯಾವುದೇ ಕಾರಣಕ್ಕೂ ಪ್ರಕಾಶ್ ರೈಗೆ ಕೊಡಬಾರದು ಎಂದು ಬಜರಂಗದಳ ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.