ಸೈನಿಕರ ನಿಧಿಗೆ ಕಿಸಾನ್ ಸಮ್ಮಾನ್ ಕಲ್ಯಾಣ ನಿಧಿ ಬಳಸಲು ಮನವಿ ಮಾಡಿದ ಬಾಗಲಕೋಟೆ ರೈತ

Published : Mar 02, 2019, 12:34 PM ISTUpdated : Mar 02, 2019, 12:36 PM IST
ಸೈನಿಕರ ನಿಧಿಗೆ ಕಿಸಾನ್ ಸಮ್ಮಾನ್ ಕಲ್ಯಾಣ ನಿಧಿ ಬಳಸಲು ಮನವಿ ಮಾಡಿದ ಬಾಗಲಕೋಟೆ ರೈತ

ಸಾರಾಂಶ

ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಸೈನಿಕರ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ಬಾಗಲಕೋಟೆ ರೈತರೋರ್ವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. 

ಬಾಗಲಕೋಟೆ :  ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯನ್ನು ಸೈನಿಕರ ಕಲ್ಯಾಣಕ್ಕೆ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ರೈತರೋರ್ವರು ಪತ್ರ ಬರೆದು ದೇಶಪ್ರೇಮ ಮೆರೆದಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಮೆಟಗುಡ್ಡ ಗ್ರಾಮದ ರೈತ ವೆಂಕಣ್ಣ ಹುಣಸಿಕಟ್ಟಿ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಒದಗಿಸಲಿರುವ 6 ಸಾವಿರ ರೂ.ಹಣ ಸೈನಿಕರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲು ಮನವಿ‌ ಮಾಡಿದ್ದಾರೆ.

ಪೈಲಟ್ ಅಭಿನಂದನ್ ಜೊತೆ ವಾಘಾ ಬಾರ್ಡರ್ ನಲ್ಲಿ ಕಾಣಿಸಿಕೊಂಡ ಆ ಮಹಿಳೆ ಯಾರು? 

ದೇಶದ ಗಡಿಭಾಗದಲ್ಲಿ ಸೈನಿಕರು ಗಡಿ ಕಾವಲು ಕಾಯುತ್ತಿದ್ದಾರೆ, ರೈತರು ಜನರಿಗೆ ಅನ್ನ ನೀಡುತ್ತಿದ್ದಾರೆ.  ದೇಶದ ಸೈನಿಕರು ಹಗಲಿರಳು ಎನ್ನದೇ 24 ಗಂಟೆಗಳ ಕಾಲ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ತಾವು  ಕಿಸಾನ್ ಸಮ್ಮಾನ್ ನಿಧಿಯಿಂದ ಒದಗಿಸಲಿರುವ  6 ಸಾವಿರ ಹಣವನ್ನ ಸೈನಿಕರ ಕಲ್ಯಾಣ ನಿಧಿಗೆ ಬಳಸಲು ಪತ್ರದ ಮೂಲಕ ತಿಳಿಸಿದರು. 

ಈ ಎಲ್ಲಾ ವಿಚಾರವನ್ನು ಪತ್ರದಲ್ಲಿ ಬರೆದು ರೈತ  ವೆಂಕಣ್ಣ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?