
ಅಹಮ್ಮದಾಬಾದ್(ಮಾ.02): ಭಾರತ ಗಡಿ ಪ್ರದೇಶದೊಳಗೆ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನ ಯುದ್ಧವಿಮಾನವನ್ನು ಹೊಡೆದುರುಳಿಸಿ, ಪಾಕ್ ನೆಲದಲ್ಲಿ ಸೆರೆಸಿಕ್ಕ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿದ್ದಾರೆ. ಭಾರತದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಕಾರ್ಟೂನ್ ಜಾಹೀರಾತು ಮೂಲಕ ಗಮನಸೆಳೆದಿರುವ ಅಮೂಲ್ (Anand Milk Union Limited)ಕಂಪನಿ ಇದೀಗ ಅಭಿನಂದನ್ಗೆ ಕಾರ್ಟೂನ್ ಜಾಹೀರಾತು ಮೂಲಕ ಗೌರವ ಸೂಚಿಸಿದೆ.
ಇದನ್ನೂ ಓದಿ: ಒಂದು ಕಡೆ ಸರ್ಜಿಕಲ್ ವೀರರು, ಮತ್ತೊಂದು ಕಡೆ ಮೋದಿ ಇರುವರು: ಸೀರೆಯಲ್ಲಿ ದೇಶಭಕ್ತಿಯೇ ಉಸಿರು!
ಕ್ರಿಕೆಟಿಗರು, ಸೆಲೆಬ್ರೇಟಿಗಳು, ಉದ್ಯಮಿಗಳು ಕಮಾಂಡರ್ಗೆ ಗೌರವದ ಸ್ವಾಗತ ಕೋರಿದ್ದಾರೆ. ವೀರ ಯೋಧನಿಗೆ ಇದೀಗ ಅಮೂಲ್ ಮಿಲ್ಕ್ ಕಂಪೆನಿ ಕಾರ್ಟೂನ್ ಮೂಲಕ ಸ್ವಾಗತ ಕೋರಿದೆ. ಅಭಿ ಜಾವೋ ಹಮಾರೆ ಪಾಸ್ ಅನ್ನೋ ಟ್ಯಾಗ್ ಲೈನ್ ಮೂಲಕ ಅಭಿನಂದರ್ನ್ನು ಸ್ವಾಗತಿಸಿದೆ.
ಇದನ್ನೂ ಓದಿ: ಎಲ್ಲಿಗಾದ್ರೂ ಕಳ್ಸಿ, ಪಾಕ್ಗೆ ಮಾತ್ರ ಬೇಡ: ಕರುನಾಡ ರೈತರ ಆಕ್ರೋಶ!
ಅಮೂಲ್ ಕಾರ್ಟೂನ್ ಜಾಹೀರಾತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಅತ್ಯುತ್ತಮ ಕಾರ್ಟೂನ್ ಅನ್ನೋ ಹೆಗ್ಗಳಿಕೆಗೆ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.