ಬಾಬ್ರಿ ಮಸೀದಿ ಪ್ರಕರಣ: ಪಿತೂರಿ ಆರೋಪದಡಿ ಅಡ್ವಾಣಿಗೆ ಆಗಲಿದೆಯೇ ಕಂಟಕ?

Published : Mar 06, 2017, 10:10 AM ISTUpdated : Apr 11, 2018, 12:54 PM IST
ಬಾಬ್ರಿ ಮಸೀದಿ ಪ್ರಕರಣ: ಪಿತೂರಿ ಆರೋಪದಡಿ ಅಡ್ವಾಣಿಗೆ ಆಗಲಿದೆಯೇ ಕಂಟಕ?

ಸಾರಾಂಶ

ಬಾಬ್ರಿ ಮಸೀದಿ ವಿವಾದ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಈಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಬಾಬ್ರಿ ಮಸೀದಿ ಮತ್ತು ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಸೇರಿದಂತೆ ಮುರುಳಿ ಮನೋಹರ್ ಜೋಷಿ, ಉಮಾಭಾರತಿ ಮುಂತಾದವರ ಮೇಲಿರುವ ಪಿತೂರಿ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವುದಾಗಿ ಸುಪ್ರೀಂಕೋರ್ಟ್ ಆದೇಶಿಸಿದೆ.

ನವದೆಹಲಿ (ಮಾ.06): ಬಾಬ್ರಿ ಮಸೀದಿ ವಿವಾದ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಈಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಬಾಬ್ರಿ ಮಸೀದಿ ಮತ್ತು ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಸೇರಿದಂತೆ ಮುರುಳಿ ಮನೋಹರ್ ಜೋಷಿ, ಉಮಾಭಾರತಿ ಮುಂತಾದವರ ಮೇಲಿರುವ ಪಿತೂರಿ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವುದಾಗಿ ಸುಪ್ರೀಂಕೋರ್ಟ್ ಆದೇಶಿಸಿದೆ.

ರಾಯ್ ಬರೇಲಿಯಲ್ಲಿರುವ ಕೆಳಹಂತದ ನ್ಯಾಯಾಲಯ ಈಗಾಗಲೇ ಅಡ್ವಾಣಿ ಸೇರಿದಂತೆ ಇನ್ನಿತರರ ಮೇಲಿರುವ ಆರೋಪಪಟ್ಟಿಯನ್ನು ಕೈಬಿಟ್ಟಿದೆ.

ತಾಂತ್ರಿಕ ಕಾರಣಕ್ಕಾಗಿ ಅಡ್ವಾಣಿ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಲು ನಾವು ಒಪ್ಪುವುದಿಲ್ಲ. ಪಿತೂರಿ ಆರೋಪ ಸೇರಿದಂತೆ 13 ಮಂದಿಯ ಮೇಲೆ ಪೂರಕ ದೋಷಾರೋಪಪಟ್ಟಿ ಸಲ್ಲಿಸಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಜಂಟಿ ನ್ಯಾಯಾಂಹ ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯದಲ್ಲಿ ನಾವು ಕೇಳುತ್ತೇವೆ ಎಂದು ಸುಪ್ರೀಂಕೋರ್ಟ್ ಸಿಬಿಐಗೆ ಹೇಳಿದೆ.

ಅಡ್ವಾಣಿ ಮತ್ತಿತರರ ಮೇಲಿರುವ ಚಾರ್ಜ್ ಶೀಟನ್ನು ಪುನಾರಾವಲೋಕಿಸುವ ಬಗ್ಗೆ ಮಾ.22 ರಂದು ಸುಪ್ರೀಂಕೋರ್ಟ್ ಅಂತಿಮ ನಿರ್ಣಯ ಕೈಗೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್