
ಹರಿದ್ವಾರ(ಏ.25): ಯೋಗ ಗುರು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್'ದೇವ್ ಅಪಘಾತದಲ್ಲಿ ಮರಣ ಹೊಂದಿದರೆ ? ಅಂತಹದೊಂದು ಸುಳ್ಳು ಸುದ್ದಿ ವಾಟ್ಸ್'ಪ್'ನಲ್ಲಿ ಹರಿದಾಡುತ್ತಿದೆ.
ಪುಣೆಯಿಂದ ಮುಂಬೈ'ಗೆ ಪ್ರಯಾಣ ಮಾಡುವಾಗ ಮುಂಬೈ-ಪುಣೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವಾಟ್ಸ್'ಅಪ್'ನಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೆಲವು ಭಾವಚಿತ್ರಗಳು ಕೂಡ ಇವೆಯಂತೆ. ಆದರೆ ಇದನ್ನು ಉದ್ದೇಶ'ಪೂರ್ವಕವಾಗಿ ಹರಿಯ ಬಿಡಲಾಗಿದೆಯಂತೆ.
ಆದರೆ ಪುಣೆ - ಮುಂಬೈ ಹೆದ್ದಾರಿಯಲ್ಲಿ ಯಾವುದೇ ಅಪಘಾತವಾಗಿಲ್ಲ ಎಂದು ಹೆದ್ದಾರಿ ನಿಯಂತ್ರಣ ಅಧಿಕಾರಿಗಳೆ ಸುದ್ದಿಸಂಸ್ಥೆಗಳಿಗೆ ದೃಢಪಡಿಸಿದ್ದಾರೆ.ಬಾಬಾ ಅವರು ಕಪ್ಪುಹಣದ ವಿರುದ್ಧ 6 ವರ್ಷದ ಹಿಂದೆ ಉಪವಾಸ ಮಾಡಿದಾಗ ಸ್ಟ್ರೆಚರ್ ಮೇಲೆ ಆಸ್ಪತ್ರೆ ಸೇರಿಸಿದ ಚಿತ್ರ ಅದಾಗಿದೆ. ಇನ್ನೊಂದು ಚಿತ್ರ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಏ.18ರಂದು ಸಂಭವಿಸಿದ ಕಾರು ಅಪಘಾತದ್ದಾಗಿದೆ.
ಈ ನಡುವೆ ಸ್ವತಃ ಬಾಬಾ ರಾಮ್'ದೇವ್ ಅವರೆ ಟ್ವೀಟ್ ಮಾಡಿದ್ದು, ತಾವು ಹರಿದ್ವಾರದಲ್ಲಿ ಸಾವಿರಾರು ಭಕ್ತರಿಗೆ ಯೋಗ ಹೇಳಿಕೊಡುತ್ತಿದ್ದು, ನಾನು ಆರೋಗ್ಯವಾಗಿದ್ದೇನೆ. ವದಂತಿಗಳನ್ನು ನಂಬಬೇಡಿ ಎಂದು' ಭಕ್ತರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.