ಎಚ್ ಡಿಕೆ ಮನೆಗೂ ಕಳುಹಿಸುವವರೆಗೂ ಬಿಡಲ್ಲ: ಬಿಎಸ್‌ವೈ

Published : Aug 11, 2018, 07:56 PM ISTUpdated : Sep 09, 2018, 08:37 PM IST
ಎಚ್ ಡಿಕೆ ಮನೆಗೂ ಕಳುಹಿಸುವವರೆಗೂ ಬಿಡಲ್ಲ: ಬಿಎಸ್‌ವೈ

ಸಾರಾಂಶ

ಸುಳ್ಳು ಭರವಸೆ ನೀಡಿ  ಜೆಡಿಎಸ್ 37 ಸ್ಥಾನ ಗಳಿಸಿದೆ. ಕುಮಾರ ಸ್ವಾಮಿ ಬಣ್ಣ ಬಯಲು ಮಾಡುವವರೆಗೂ ಬಿಡಲ್ಲ. ಲೋಕಸಭೆ ಗೆಲ್ಲುವವರೆಗೆ ಮನೆಗೆ ಹೋಗಲ್ಲ. ಲೋಕಸಭಾ ಚುನಾವಣೆಗೂ ಮುನ್ನಾ ರಾಜ್ಯ ರಾಜಕಾರಣದಲ್ಲಿ ಏರುಪೇರಾಗಬಹುದು .ಕಾದು ನೋಡೋಣ ಎಂದು ಬಿಎಸ್ ವೈ ಹೇಳಿದ್ದಾರೆ.  

ಬಳ್ಳಾರಿ (ಆ. 11):  ರಾಜ್ಯದ ಇತಿಹಾಸದಲ್ಲಿ 104 ಜನ ಶಾಸಕರ ಇದ್ದವರು ವಿರೋಧಪಕ್ಷದಲ್ಲಿದ್ದೇವೆ. ದೇವೇಗೌಡರ ಕಾಲಿಗೆ ಬಿದ್ದು, ಬೇಷರತ್ತು ಬೆಂಬಲದಿಂದ ಅಧಿಕಾರ ಪಡೆದುಕೊಂಡರು.  ಕುಮಾರ ಸ್ವಾಮಿ ಬಗ್ಗೆ ಕಾಂಗ್ರೆಸ್,  ಕಾಂಗ್ರೆಸ್ ಬಗ್ಗೆ ಕುಮಾರ ಸ್ವಾಮಿ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ.   

ಜಿಲ್ಲಾ ಉಸ್ತುವಾರಿ ಸಚಿವರು ಮಾಡುವ ಕೆಲಸ ಪ್ರತಿ ಪಕ್ಷದವರಾಗಿ ನಾವು ಮಾಡುತ್ತಿದ್ದೇವೆ. ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಸರ್ಕಾರದ ಮೂಗು ಹಿಡಿದು ಹೋರಾಟ ಮಾಡುತ್ತೇವೆ. ಸಭೆ ಸಮಾರಂಭಗಳಿಂದ ಸರ್ಕಾರ ಬಗ್ಗಲ್ಲ. ಹೋರಾಟ ಮಾಡಬೇಕು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗುವವರೆಗೆ ಹೋರಾಟ ನಿಲ್ಲದು. ಅನಿಷ್ಟ ಸರ್ಕಾರ ಯಾವಾಗ ಹೋಗುತ್ತದೋ ಎಂದು ಜನ ಕಾಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.   

ಲೋಕಸಭೆಯಲ್ಲಿ ಅವಿಶ್ವಾಸ ಮಂಡಿಸಿ ಕಾಂಗ್ರೆಸ್ ‌ಮುಖಭಂಗ ಅನುಭವಿಸಿತು. ರಾಜ್ಯದಲ್ಲಿ ಯಾವ ಕಾಮಗಾರಿಯೂ ನಡೆಯುತ್ತಿಲ್ಲ. ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಿಂಗ್ ರೋಡ್ ಸೇರಿದಂತೆ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿಲ್ಲ. ರಾಜಕೀಯ ದೊಂಬರಾಟ ನಡೆಯುತ್ತಿದೆ ಎಂದು ಬಿಎಸ್ ವೈ ಹೇಳಿದ್ದಾರೆ.   

ಲೋಕಸಭೆಯಲ್ಲಿ ಗೆಲ್ಲಬೇಕು. ಅಭ್ಯರ್ಥಿ ಯಾರೆಂದು ತಿಳಿಸುತ್ತವೆ ಅವರಿಗೆ ಬೆಂಬಲಿಸಿ. ಅಮಿತ್ ಷಾ ಮೋದಿ  ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಕಾರ್ಯಕರ್ತರಿಗೆ ಬಿಎಸ್ ವೈ ನೀತಿ ಪಾಠ ಹೇಳಿದ್ದಾರೆ.  

ಸುಳ್ಳು ಭರವಸೆ ನೀಡಿ  ಜೆಡಿಎಸ್ 37 ಸ್ಥಾನ ಗಳಿಸಿದೆ. ಕುಮಾರ ಸ್ವಾಮಿ ಬಣ್ಣ ಬಯಲು ಮಾಡುವವರೆಗೂ ಬಿಡಲ್ಲ. ಲೋಕಸಭೆ ಗೆಲ್ಲುವವರೆಗೆ ಮನೆಗೆ ಹೋಗಲ್ಲ.  ಲೋಕಸಭಾ ಚುನಾವಣೆಗೂ ಮುನ್ನಾ ರಾಜ್ಯ ರಾಜಕಾರಣದಲ್ಲಿ ಏರುಪೇರಾಗಬಹುದು .ಕಾದು ನೋಡೋಣ ಎಂದು ಬಿಎಸ್ ವೈ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!