ಅಲ್ಲಿ ಇಲ್ಲಿ ಓಡುವೆ ಏಕೆ: 'ಆಯುಷ್ಮಾನ್ ಭಾರತ್' ಮನೆ ಬಾಗಿಲಿಗೆ ಬರ್ತಿದೆ ಬೇಕೆ?

Published : Jan 09, 2019, 05:26 PM IST
ಅಲ್ಲಿ ಇಲ್ಲಿ ಓಡುವೆ ಏಕೆ: 'ಆಯುಷ್ಮಾನ್ ಭಾರತ್' ಮನೆ ಬಾಗಿಲಿಗೆ ಬರ್ತಿದೆ ಬೇಕೆ?

ಸಾರಾಂಶ

ಮನೆ ಬಾಗಿಲಿಗೆ ಬರ್ತಿದೆ ಆಯಷ್ಮಾನ್ ಭಾರತ್ ಅರ್ಹತಾ ಪತ್ರ| ಅರ್ಜಿ ಹಾಕುವ ಗೊಡವೆ ಇಲ್ಲ, ದಾಖಲೆಯ ಕಿರುಕುಳ ಇಲ್ಲ| ನೇರವಾಗಿ ಮನೆಗೆ ಬರುತ್ತಿವೆ ಆಯುಷ್ಮಾನ್ ಭಾರತ್ ಅರ್ಹತಾ ಪತ್ರಗಳು| ಕೇಂದ್ರದ ನಿರ್ಧಾರದಿಂದ ಜನಸಾಮಾನ್ಯ ಫುಲ್ ಖುಷ್| ವಿಳಾಸ ತಪ್ಪಿನಿಂದ ಪೋಸ್ಟ್‌ಮನ್‌ಗಳಿಗೆ ಪರದಾಟ

ಬೆಂಗಳೂರು(ಜ.09): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 'ಆಯುಷ್ಮಾನ್‌ ಭಾರತ' ಆರೋಗ್ಯ ವಿಮೆ ಯೋಜನೆಯ ಅರ್ಹತಾ ಪತ್ರಗಳು ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮನೆಗೆ ತಲುಪುತ್ತಿವೆ.

ಯಾವುದೇ ಅರ್ಜಿ ಅಥವಾ ದಾಖಲೆಯ ಕಿರುಕುಳ ಇಲ್ಲದೆ ಈ ಯೋಜನೆಯ ಪ್ರಯೋಜನ ತಮಗೆ ಸಿಗುತ್ತಿರುವ ಬಗ್ಗೆ ನಾಗರಿಕರು ಫುಲ್ ಖುಷ್ ಆಗಿದ್ದಾರೆ. ಆದರೆ ಅರ್ಹತಾ ಪತ್ರದಲ್ಲಿ ನಮೂದಿಸಿರುವ ವಿಳಾಸಗಳು ತಪ್ಪಾಗಿರುವುದರಿಂದ ಪೋಸ್ಟ್‌ಮನ್‌ಗಳು ಪರದಾಡುತ್ತಿದ್ದಾರೆ. 

ಅರ್ಹತಾ ಪತ್ರ ಹೊಂದಿದರೆ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಕಾರ್ಡ್‌ ಪಡೆಯಲು ಮತ್ಯಾವುದೇ ದಾಖಲೆ ಒದಗಿಸುವಂತಿಲ್ಲ ಎಂಬುದು ಈ ಪ್ರಕ್ರಿಯೆಯ ಉದ್ದೇಶ. ಆದರೆ, ಸರಿ ಇದ್ದ ವಿಳಾಸವನ್ನೇ ಪತ್ತೆ ಹಚ್ಚಿ ಬಟಾವಡೆ ಮಾಡುವುದೇ ಕಷ್ಟದ ಕೆಲಸ. ಈ ನಡುವೆ ತಪ್ಪು ವಿಳಾಸಗಳಿಂದಾಗಿ ಆಯುಷ್ಮಾನ್‌ ಅರ್ಹತಾ ಪತ್ರಗಳ ಸಮರ್ಪಕ ವಿತರಣೆ ಪೋಸ್ಟ್‌ ಮ್ಯಾನ್‌ಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಅಂತ್ಯೋದಯ ಕುಂಟುಂಬಕ್ಕೆ ಸಂಪೂರ್ಣ ಉಚಿತ ಚಿಕಿತ್ಸೆ, ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಹಾಗೂ ಎಪಿಲ್ ಕುಟುಂಬಕ್ಕೆ 1.50 ಲಕ್ಷ ರೂ.ವರೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!