ರೋಗನಿವಾರಕ ಗಿಡಮೂಲಿಕೆಗಳು

Published : Sep 17, 2016, 07:45 AM ISTUpdated : Apr 11, 2018, 01:01 PM IST
ರೋಗನಿವಾರಕ ಗಿಡಮೂಲಿಕೆಗಳು

ಸಾರಾಂಶ

ಇಲ್ಲಿದೆ ನೋಡಿ ನಿಮಗಾಗಿ ಕೆಲವು ಗಿಡಮೂಲಿಕೆಗಳು ಮತ್ತು ಅದರಿಂದಾಗುವ ಉಪಯೋಗಗಳು

ಇತ್ತೀಚಿನ ದಿನಗಳಲ್ಲಿ ಕಾಯಿಲೆ ಬಂದರೆ ಆಸ್ಪತ್ರೆಗಳಿಗೆ ಹೋಗುತ್ತೇವೆ. ಅಲ್ಲಿ ನೀಡುವ ಔಷಧಿಗಳನ್ನು ಸೇವಿಸುವ ಪ್ರಯತ್ನದಲ್ಲಿ ನಮ್ಮಲ್ಲಿ ಇರುವ ಅದೆಷ್ಟೋ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಮರೆತೇಬಿಟ್ಟಿರುತ್ತೇವೆ. ಇಲ್ಲಿದೆ ನೋಡಿ ನಿಮಗಾಗಿ ಕೆಲವು ಗಿಡಮೂಲಿಕೆಗಳು ಮತ್ತು ಅದರಿಂದಾಗುವ ಉಪಯೋಗಗಳು.

ಬಾದಾಮಿ ಜಾತಿಯ ಸಸ್ಯ

ಬಾದಾಮಿ ಯಂತಹ ಸಸ್ಯಗಳು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ, ಮತ್ತು ಕೆಮ್ಮು, ಉಬ್ಬಸ ಅಥವಾ ಅಸ್ತಮಾ ರೋಗಗಳಿಗೆ ರಾಮಬಾಣವಾಗಿದೆ. ಹಾಗೂ ಅತಿಯಾದ ರಕ್ತಸ್ರಾವವನ್ನು ತಡೆಯುತ್ತದೆ. ಚರ್ಮದ ಅಲರ್ಜಿಯನ್ನು ತಡೆಯುತ್ತದೆ. ಮಕ್ಕಳಲ್ಲಿ ಉಂಟಾಗುವ ಅತಿಸಾರವನ್ನು ದೂರಮಾಡುತ್ತದೆ. ಹಾಗೂ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದನ್ನು ತಪ್ಪಿಸುತ್ತದೆ. ಮೆಧುಮೇಹ, ರಕ್ತದೊತ್ತಡವನ್ನು ನಿವಾರಿಸುತ್ತದೆ.

ಕಾಡುಸೇವಂತಿಗೆ

ಇದರಲ್ಲಿ ವಿಟಮಿನ್ ಎ, ಸಿ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ. ಮೂತ್ರದ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಮಲಬದ್ಧತೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ತೀವ್ರತರವಾದ ಕೀಲು ನೋವುಗಳನ್ನು ಉಪಶಮನ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಹಸಿವು ಉಂಟಾಗಲು ಸಹಾಯಕವಾಗುತ್ತದೆ.

ಜೊಂಡು ಹುಲ್ಲು

ಇದು ಗಾಯವನ್ನು ಒಣಗುವಂತೆ ಮಾಡುತ್ತದೆ. ಚರ್ಮದ ಸೋಂಕಿಗೆ ಒಂದು ಉತ್ತಮ ಮುಲಾಮಾಗಿ ಕೆಲಸ ಮಾಡುತ್ತದೆ.ನೆಗಡಿಯನ್ನು ನಿವಾರಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!