ಮಾನವೀಯತೆ ಮೆರೆದ ಆಟೋ ಚಾಲಕ

Published : Nov 24, 2017, 05:55 PM ISTUpdated : Apr 11, 2018, 12:50 PM IST
ಮಾನವೀಯತೆ ಮೆರೆದ ಆಟೋ ಚಾಲಕ

ಸಾರಾಂಶ

ಆಟೋದಲ್ಲಿ ಬಿಟ್ಟ ಒಡವೆಗಳನ್ನ ಕಮಿಷ್ ನರ್ ಕಛೇರಿಗೆ ನೀಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ  ಮೆರೆದಿದ್ದಾರೆ.

ಬೆಂಗಳೂರು (ನ.24): ಆಟೋದಲ್ಲಿ ಬಿಟ್ಟ ಒಡವೆಗಳನ್ನ ಕಮಿಷ್ ನರ್ ಕಛೇರಿಗೆ ನೀಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ  ಮೆರೆದಿದ್ದಾರೆ.

ಸುಮಾರು 4 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನ ವಾಪಸ್ಸು ನೀಡಿ ಆಟೋ ಚಾಲಕ ಮಹ್ಮಮದ್ ಇಕ್ಬಾಲ್‌ ಪ್ರಾಮಾಣಿಕತೆ ಮೆರೆದಿದ್ದಾರೆ.  ಕಳೆದ ಸೆ. 30 ರಂದು ಚೆನ್ನೈ  ಮೂಲದ  ಸುನಿಲ್ ಕಮಾರ್ ಕುಟುಂಬ ಬೆಂಗಳೂರಿಗೆ ಬಂದಿತ್ತು.  ಈ ವೇಳೆ ಇಕ್ಬಾಲ್ ಆಟೋದಲ್ಲಿ ಸುನಿಲ್ ಕುಮಾರ್ ಕುಟುಂಬ ಪ್ರಯಾಣ ಮಾಡಿದ್ದರು. ಆಗ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಆಟೋ‌ದಲ್ಲಿ‌ ಮರೆತು ಹೋಗಿದ್ದರು.  ಈ ಕುರಿತು ಜೀವನ ಭೀಮಾನಗರದಲ್ಲಿ ಪ್ರಕರಣ ದಾಖಲಾಗಿತ್ತು.  ಮರುದಿನ ಇಕ್ಬಾಲ್ ಆಟೋ ಓಡಿಸುವಾಗಿ‌ ಈ ಬ್ಯಾಗ್ ಗಮನಿಸಿದ್ದಾರೆ.  ತಕ್ಷಣ  ಬ್ಯಾಗ್‌'ಅನ್ನು ಕಮಿಷನರ್ ಕಛೇರಿಗೆ‌ ಒಪ್ಪಿಸಿದ್ದಾರೆ.  ಇದೀಗ‌ ಪೊಲೀಸರು ಒಡವೆಗಳನ್ನ ಕಳೆದುಕೊಂಡವರಿಗೆ ಮಾಹಿತಿ ತಿಳಿಸಿ‌ ಇಕ್ಬಾಲ್‌ ಸಮ್ಮುಖದಲ್ಲಿ‌ ಹಣ ವಾಪಸ್ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ಜೊತೆಗಿನ ಮೈತ್ರಿಗೆ ಬಿಗ್ ಟ್ವಿಸ್ಟ್ ಕೊಟ್ಟು ಹಾಸನದಲ್ಲಿ ರಣಕಹಳೆ ಮೊಳಗಿಸಿದ ಹೆಚ್‌ಡಿಡಿ
ಧರ್ಮಸ್ಥಳ ಬುರುಡೆ ಕೇಸ್‌: ಜ.3ಕ್ಕೆ ತೀರ್ಪು ಮುಂದೂಡಿಕೆ