ಶೀಘ್ರದಲ್ಲೇ ಬೆಂಗಳೂರು ಪೊಲೀಸರ ವಶಕ್ಕೆ ಎಟಿಎಂ ರಕ್ಕಸ 'ರೆಡ್ಡಿ'

Published : Feb 05, 2017, 11:31 AM ISTUpdated : Apr 11, 2018, 01:07 PM IST
ಶೀಘ್ರದಲ್ಲೇ ಬೆಂಗಳೂರು ಪೊಲೀಸರ ವಶಕ್ಕೆ ಎಟಿಎಂ ರಕ್ಕಸ 'ರೆಡ್ಡಿ'

ಸಾರಾಂಶ

ನಿನ್ನೆಯವರೆಗೂ ಗೊಂದಲ ತಾಳಿದ್ದ ಬೆಂಗಳೂರು ಪೊಲೀಸರು ಆರೋಪಿಯ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿದ್ದಾರೆ. ಗೃಹ ಸಚಿವರು ಬಾಯ್ಬಿಟ್ಟು ಹೇಳಿದ್ದರೂ ನಮಗೆ ಮಾಹಿತಿಯೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದರು. ಈಗ ಆಯುಕ್ತ ಪ್ರವೀಣ್​ ಸೂದ್​ ಅವರೆ ಇತನೇ ಪ್ರಮುಖ ಆರೋಪಿ ಎಂದು ಖಚಿತ ಪಡಿಸಿದ್ದಾರೆ.

ಚಿತ್ತೂರು(ಫೆ.04): ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ಎಟಿಎಂ'ನ ಅಮಾನವೀಯ ಹಲ್ಲೆ ಪ್ರಕರಣದ ಆರೋಪಿ ಮಧುಕರ್ ರೆಡ್ಡಿಯ ಬಂಧನವನ್ನು ಮುಕ್ತಾಯಗೊಳಿಸಿದ ಮದನಪಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ನಿನ್ನೆಯವರೆಗೂ ಗೊಂದಲ ತಾಳಿದ್ದ ಬೆಂಗಳೂರು ಪೊಲೀಸರು ಆರೋಪಿಯ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿದ್ದಾರೆ. ಗೃಹ ಸಚಿವರು ಬಾಯ್ಬಿಟ್ಟು ಹೇಳಿದ್ದರೂ ನಮಗೆ ಮಾಹಿತಿಯೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದರು. ಈಗ ಆಯುಕ್ತ ಪ್ರವೀಣ್​ ಸೂದ್​ ಅವರೆ ಇತನೇ ಪ್ರಮುಖ ಆರೋಪಿ ಎಂದು ಖಚಿತ ಪಡಿಸಿದ್ದಾರೆ.

ಇನ್ನು ಪರೇಡ್​ ವೇಳೆ ಸಿಕ್ಕಿಬಿದ್ದಿದ್ದ ಮಧುಕರ್​ ರೆಡ್ಡಿ, ಹೈದರಾಬಾದ್​ , ಮದನಪಲ್ಲಿ  ಬೆಂಗಳೂರು ಮತ್ತು ಅನಂತಪುರ ಪೊಲೀಸರಿಗೂ ಬೇಕಾಗಿರುವ ಕುಖ್ಯಾತ ಕ್ರಿಮಿನಲ್.  ಚಿತ್ತೂರಿನ ಮದನಪಲ್ಲಿ ಪೊಲೀಸರ ವಶದಲ್ಲಿರುವ ಮಧುಕರ್ ರೆಡ್ಡಿಯನ್ನು ತಮ್ಮ ಕಷ್ಟಡಿಗೆ ಒಪ್ಪಿಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿಕೊಳ್ಳುವ ಸಾದ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ