ರಂಗ ಕರ್ಮಿ ರಂಗ ನಿರ್ದೇಶಕ, ನಟ ಆಶೋಕ್ ಬಾದರದಿನ್ನಿ ನಿಧನ

Published : Nov 24, 2016, 09:32 AM ISTUpdated : Apr 11, 2018, 12:34 PM IST
ರಂಗ ಕರ್ಮಿ ರಂಗ ನಿರ್ದೇಶಕ, ನಟ ಆಶೋಕ್ ಬಾದರದಿನ್ನಿ ನಿಧನ

ಸಾರಾಂಶ

ಹಿರಿಯ ರಂಗ ಕರ್ಮಿ ರಂಗ ನಿರ್ದೇಶಕ ಹಾಗೂ ಕನ್ನಡ ಮತ್ತು ಹಿಂದಿ ಚಲನ ಚಿತ್ರಗಳ ನಟ ಆಶೋಕ್ ಬಾದರದಿನ್ನಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು   ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಬೆಂಗಳೂರು(ನ.24): ಹಿರಿಯ ರಂಗ ಕರ್ಮಿ ರಂಗ ನಿರ್ದೇಶಕ ಹಾಗೂ ಕನ್ನಡ ಮತ್ತು ಹಿಂದಿ ಚಲನ ಚಿತ್ರಗಳ ನಟ ಆಶೋಕ್ ಬಾದರದಿನ್ನಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು   ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಬಾದರ ದಿನ್ನಿ ಹೆಸರಾಂತ  ರಂಗ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಗಿರೀಶ್ ಕಾರ್ನಾಡ್ ಅವರ ತುಘಲಕ್ ನಾಟಕವನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು, ಇಷ್ಟೆ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಇವರ ನಾಟಕಗಳು ಪ್ರರ್ದಶನಗೊಂಡಿವೆ.  

ಇವರ ಸೇವೆಯನ್ನು ಮೆಚ್ಚಿ  ಕರ್ನಾಟಕ ನಾಟಕ ಅಕಾಡೆಮಿಯಿಂದ ಹಿಡಿದು ಮಠ ಮಾನ್ಯಗಳು ಮತ್ತು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇಂತಹ ಕಲಾ ಸೇವಕ ಹಾಗೂ ಹಿರಿಯ ರಂಗ ಕರ್ಮಿಯನ್ನು ಕಳೆದುಕೊಂಡಿರುವುದು  ರಂಗ ಭೂಮಿ ಹಾಗೂ ಚಲನ ಚಿತ್ರ ರಂಗಕ್ಕೆ ಅಪಾರ ನಷ್ಟವುಂಟಾಗಿದೆ. 

ಐಯುಡಿಪಿ ಬಡಾವನೆಯಲ್ಲಿರೋ ನಿವಾಸದಲ್ಲಿ  ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೇ ಹೊತ್ತಿಗೆ ವೀರ ಶೈವ ರುದ್ರ ಭೂಮಿಯಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರುತ್ತದೆಂದು ಕುಟುಂಬ ವರ್ಗ ತಿಳಿಸಿದೆ.   


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು