ಗಂಗೆಯಲ್ಲಿ ಲೀನರಾದ ಅನಂತ್

Published : Nov 21, 2018, 09:27 AM IST
ಗಂಗೆಯಲ್ಲಿ ಲೀನರಾದ ಅನಂತ್

ಸಾರಾಂಶ

ಇತ್ತೀಚೆಗಷ್ಟೇ ವಿಧಿವಶರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್‌ ಅವರ ಚಿತಾಭಸ್ಮವನ್ನು ಮಂಗಳವಾರ ಇಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.   

ಡೆಹ್ರಾಡೂನ್‌(ಉತ್ತರಾಖಂಡ್‌): ಇತ್ತೀಚೆಗಷ್ಟೇ ವಿಧಿವಶರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್‌ ಅವರ ಚಿತಾಭಸ್ಮವನ್ನು ಮಂಗಳವಾರ ಇಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. 

ಈ ಸಂದರ್ಭದಲ್ಲಿ ಉತ್ತರಾಖಂಡ್‌ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿ ಮದನ್‌ ಕೌಶಿಕ್‌ ಅವರ ಉಪಸ್ಥಿತಿಯಲ್ಲಿದ್ದರು. ಬಳಿಕ ಮಾತನಾಡಿದ ತ್ರಿವೇಂದ್ರ ಸಿಂಗ್‌ ಅವರು, ‘ಅನಂತ ಕುಮಾರ್‌ ಅವರು ಉತ್ತರಾಖಂಡಕ್ಕೆ ಒಳ್ಳೆಯದನ್ನೇ ಬಯಸುವ ನಾಯಕರಾಗಿದ್ದರು.

 ರಾಜ್ಯದಲ್ಲಿ ತಲೆ ಎತ್ತಿರುವ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಹಾಗೂ ತಾಂತ್ರಿಕತೆ ಸಂಸ್ಥೆಯು ಅನಂತ ಕುಮಾರ್‌ ಅವರ ಕೊಡುಗೆ,’ ಎಂದು ಬಣ್ಣಿಸಿದರು. ಅವರು ಉತ್ತರಾಖಂಡ್‌ನ ಜನತೆಯ ಹೃದಯ ಮತ್ತು ನೆನಪಿನಲ್ಲಿ ಸದಾ ಚಿರಾಯುವಾಗಿರುತ್ತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?