ತಾಕತ್ತಿದ್ರೆ ನಮ್ಮೂರಲ್ಲಿ ಚುನಾವಣೆ ಎದುರಿಸಿ: ಶಾಗೆ ಓವೈಸಿ ಸವಾಲು!

Published : Sep 16, 2018, 08:39 AM ISTUpdated : Sep 19, 2018, 09:26 AM IST
ತಾಕತ್ತಿದ್ರೆ ನಮ್ಮೂರಲ್ಲಿ ಚುನಾವಣೆ ಎದುರಿಸಿ: ಶಾಗೆ ಓವೈಸಿ ಸವಾಲು!

ಸಾರಾಂಶ

ತೆಲಂಗಾಣದಲ್ಲಿ ತಾರಕಕ್ಕೇರಿದ ಚುನಾವಣಾ ಸಮರ! ಅಮಿತ್ ಶಾ, ಓವೈಸಿ ನಡುವೆ ಮಾತಿನ ಸಮರ! ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್‌ನಿಂದ ಸ್ಪರ್ಧಿಸಿ! ಅಮಿತ್ ಶಾ ಗೆ ಸವಾಲೆಸೆದ ಅಸದುದ್ದೀನ್ ಓವೈಸಿ! ಬಿಜೆಪಿ ತನ್ನ ನಾಲ್ಕು ಸೀಟು ಉಳಿಸಿಕೊಂಡರೆ ಹೆಚ್ಚು  

ಹೈದರಾಬಾದ್(ಸೆ.16): 2019 ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾಗೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. 

ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, 2019 ರಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾ ಗೆ ಸವಾಲು ಹಾಕಿದ್ದಾರೆ. 

ಬಿಜೆಪಿಗೆ ತೆಲಂಗಾಣದಲ್ಲಿ ಈಗಿರುವ 4 ಸ್ಥಾನಗಳನ್ನೂ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಓವೈಸಿ ಹೇಳಿದ್ದು, ರಾಜ್ಯದಲ್ಲಿ ಬಿಜೆಪಿ ಬಲಪಡಿಸಲು ಖುದ್ದು ಅಮಿತ್ ಶಾ ಅವರೇ ಇಲ್ಲಿಂದ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಕೆಸಿಆರ್ ನಿರ್ಧಾರವನ್ನು ಪ್ರಶ್ನಿಸಿದ್ದ ಅಮಿತ್ ಶಾಗೆ 2002 ರಲ್ಲಿ ಗುಜರಾತ್ ಗಲಭೆ ನಂತರ ಅವಧಿಗೂ ಮುನ್ನ ನಡೆದಿದ್ದ ಚುನಾವಣೆಯನ್ನು ಓವೈಸಿ ನೆನಪಿಸಿದ್ದಾರೆ. 2002 ರಲ್ಲಿ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರೂ ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿದ್ದು, ಅಮಿತ್ ಶಾ ಅವರಿಗೆ ನೆನಪಿಲ್ಲವೇ ಎಂದು ಹರಿಹಾಯ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!