
ನವದೆಹಲಿ(ಮೇ.15): ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಅಂತಾ ರಾಜಕೀಯಕ್ಕೆ ಬಂದ ಆಮ್ ಆದ್ಮಿ ಪಕ್ಷದಲ್ಲಿ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪಗಳು ಸುರಿಮಳೆ ಶುರುವಾಗಿದೆ. ಕೇಜ್ರಿವಾಲ್ ಮತ್ತು ಕಪಿಲ್ ಮಿಶ್ರ ನಡುವೆ ನಡೀತಿದ್ದ ಆರೋಪಗಳ ಸರಣಿಗೆ ಈಗ ಕೇಜ್ರಿವಾಲ್ ಪತ್ನಿ ಎಂಟ್ರಿ ಕೊಟ್ಟಿದ್ದಾರೆ.
ಕಪಿಲ್ ಮಿಶ್ರ ತನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆಂದು ಸುನೀತಾ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಮಿಶ್ರ ರೀ-ಟ್ವೀಟ್ ಮಾಡಿದ್ದಾರೆ. ಇಬ್ಬರ ನಡುವೆಯೂ ಟ್ವಿಟ್ಟರ್ ವಾರ್ ಶುರುವಾಗಿದೆ. ನೀನು ನನ್ನನ್ನ ದೀದಿ ಅಂತಾ ಕರೀತಾ ಇದ್ದೆ. ಕಪಿಲ್ ಮಿಶ್ರ ಒಬ್ಬ ವಿಶ್ವಾಸಘಾತುಕ. ಪ್ರಕೃತಿಯೇ ಅವನಿಗೆ ಪಾಠ ಕಲಿಸುತ್ತೇ. ಅವನು ಮಾಡ್ತಿರುವುದು ಸುಳ್ಳು ಆರೋಪ. ಅಂತಾ ಸುನೀತಾ ಕೇಜ್ರಿವಾಲ್ ಟ್ವೀಟ್ ಮಾಡಿದ್ರೆ. ಅದಕ್ಕೆ ರೀ-ಟ್ವೀಟ್ ಮಾಡಿದ ಮಿಶ್ರಾ.. ಸುನೀತಾ ಅವ್ರಿಗೆ ಮನೆಯಲ್ಲಾಗುವ ಎಲ್ಲಾ ಬೆಳವಣಿಗೆಗಳು ತಿಳಿದಿದೆ.ಆದರೆ ಕೇಜ್ರಿವಾಲ್'ರ ಧರ್ಮಪತ್ನಿಯಾಗಿರುವುದರಿಂದ ಅವ್ರು ಧರ್ಮವನ್ನು ಬಿಡುತ್ತಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.