
ಬೀಜಿಂಗ್ (ಏ.12): ಅರುಣಾಚಲ ಪ್ರದೇಶಕ್ಕೆ ಟಿಬೆಟಿಯನ್ ಬೌದ್ಧ ಗುರು ದಲಾಯಿ ಲಾಮಾ ಭೇಟಿ ನೀಡಿರುವುದನ್ನು ಟೀಕಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ, ಅರುಣಾಚಲ ಪ್ರದೇಶ ಜನರು ಭಾರತದ ‘ಅಕ್ರಮ’ ಆಳ್ವಿಕೆಯಿಂದ ಬೇಸತ್ತಿದ್ದಾರೆ ಎಂದು ಹೇಳಿದೆ.
ಭಾರತದ ಅಕ್ರಮ ಆಳ್ವಿಕೆಯಿಂದ ದಕ್ಷಿಣ ಟಿಬೆಟ್ ಜನರು ಕಷ್ಟವನ್ನನುಭವಿಸುತ್ತಿದ್ದಾರೆ. ಅವರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ, ಅಲ್ಲಿನ ಜನರು ಚೀನಾಗೆ ಸೇರುವುದನ್ನು ನಿರೀಕ್ಷಿಸುತ್ತಿದ್ದಾರೆ, ಎಂದು ಚೀನಾ ಡೈಲಿಯು ಕ್ಯಾತೆ ತೆಗೆದಿದೆ.
ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಕಳೆದ ವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಚೀನಾ ಅದನ್ನು ವಿರೋಧಿಸುತ್ತಲೇ ಬಂದಿದೆ. ಭಾರತವು ಪ್ರಮಾದವೆಸಗುತ್ತಿದೆಯೆಂದು ಹೇಳಿರುವ ಚೀನಾ ಭಾರತದ ಕ್ರಮವು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಲಿದೆ ಎಂದು ಚ್ಚರಿಸಿದೆ.
ಎ.4 ರಿಂದ ಒಂದು ವಾರಗಳ ಕಾಲ ದಲಾಯಿ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಟಿಬೆಟಿಯನ್ ಬೌದ್ಧರ 6ನೇ ಧರ್ಮಗುರು ಸ್ಯಾಂಗ್ಯಾಂಗ್ ಗ್ಯಾಸ್ಟೋ ಅವರ ಜನ್ಮಸ್ಥಳವಾದ ತವಾಂಗ್’ಗೂ ಭೇಟಿ ನೀಡಿದ್ದರು.
ಟಿಬೆಟಿಯನ್ ಬೌದ್ಧರ 14ನೇ ಧರ್ಮಗುರು (ದಲಾಯಿ ಲಾಮಾ) ವಾಗಿರುವ ತೆಂಝಿನ್ ಗ್ಯಾಸ್ಟೋ ಅವರನ್ನು ಚೀನಾವು ಪ್ರತ್ಯೇಕವಾದಿಯಾಗಿ ಕಾಣುತ್ತದೆ ಹಾಗೂ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಾ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.