ಬ್ಯಾಂಕ್ ಎಫ್‌ಡಿಗೆ ಖಾತರಿ ನೀಡುವ ಸಂಸ್ಥೆ ರದ್ದು: ಆತಂಕ

Published : Dec 03, 2017, 03:01 PM ISTUpdated : Apr 11, 2018, 12:34 PM IST
ಬ್ಯಾಂಕ್ ಎಫ್‌ಡಿಗೆ ಖಾತರಿ ನೀಡುವ ಸಂಸ್ಥೆ ರದ್ದು: ಆತಂಕ

ಸಾರಾಂಶ

ಬ್ಯಾಂಕ್‌ಗಳು ದಿವಾಳಿಯಾದಲ್ಲಿ ಠೇವಣಿದಾರರ ಹಿತ ಕಾಯುವ ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ವನ್ನು ರದ್ದುಗೊಳಿಸುವ ಪ್ರಸ್ತಾವಿತ ಬ್ಯಾಂಕ್ ದಿವಾಳಿ ಮಸೂದೆಯ ಬಗ್ಗೆ ಠೇವಣಿದಾರರಲ್ಲಿ ಆತಂಕ ಶುರುವಾಗಿದೆ. ಆದರೆ, ‘ಈ ಬಗ್ಗೆ ಆತಂಕ ಬೇಡ. ಇದನ್ನು ಬದಲಿಸಲು ಅವಕಾಶವಿದೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.

ನವದೆಹಲಿ: ಬ್ಯಾಂಕ್‌ಗಳು ದಿವಾಳಿಯಾದಲ್ಲಿ ಠೇವಣಿದಾರರ ಹಿತ ಕಾಯುವ ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ವನ್ನು ರದ್ದುಗೊಳಿಸುವ ಪ್ರಸ್ತಾವಿತ ಬ್ಯಾಂಕ್ ದಿವಾಳಿ ಮಸೂದೆಯ ಬಗ್ಗೆ ಠೇವಣಿದಾರರಲ್ಲಿ ಆತಂಕ ಶುರುವಾಗಿದೆ. ಆದರೆ, ‘ಈ ಬಗ್ಗೆ ಆತಂಕ ಬೇಡ. ಇದನ್ನು ಬದಲಿಸಲು ಅವಕಾಶವಿದೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.

‘ಹಣಕಾಸು ಗೊತ್ತುವಳಿ ಹಾಗೂ ಠೇವಣಿ ವಿಮೆ (ಎಫ್’ಆರ್‌ಡಿಐ) ಮಸೂದೆ-2017’ ಹೆಸರಿನ ಈ ವಿಧೇಯಕವನ್ನು ಡಿ.15ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.

ಈ ವಿಧೇಯಕದಲ್ಲಿ ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ವನ್ನು (ಡಿಐಸಿಜಿಇ) ರದ್ದುಗೊಳಿಸುವ ಪ್ರಸ್ತಾಪ ಇದೆ.

ಈ ನಿಗಮವು ಬ್ಯಾಂಕ್ ದಿವಾಳಿ ಆದರೂ ಕೂಡ ಠೇವಣಿದಾರರಿಗೆ 1 ಲಕ್ಷ ರು.ವರೆಗಿನ ಠೇವಣಿ ವಾಪಸು ಬರುವಂತೆ ಖಾತರಿ ನೀಡುತ್ತದೆ. ಆದರೆ ಸಿಐಸಿಜಿಇಯನ್ನು ರದ್ದು ಮಾಡಿದರೆ ಠೇವಣಿದಾರರ ಸುರಕ್ಷತೆಯ ಹಣೆಬರಹವೇನು ಎಂಬ ಆತಂಕ ಬ್ಯಾಂಕ್ ಗ್ರಾಹಕರಲ್ಲಿ ಮನೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ