
ಶ್ರೀನಗರ (ನ.21): ಮುಸುಕುಧಾರಿ ಸಶಸ್ತ್ರ ವ್ಯಕ್ತಿಗಳು ಇಲ್ಲಿನ ಬ್ಯಾಂಕೊಂದಕ್ಕೆ ನುಗ್ಗಿ ನಿಷೇಧಿತ 500 ಹಾಗೂ 1000 ನೋಟುಗಳಿರುವ 13 ಲಕ್ಷ ರೂಮೌಲ್ಯದ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶ್ರೀನಗರದಿಂದ 100 ಕಿಮೀ ದೂರದಲ್ಲಿರುವ ಮಲ್ಪೋರದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಈ ದರೋಡೆ ನಡೆದಿದೆ. ಉಗ್ರವಾದಿಗಳೇ ಈ ಕೆಲಸ ಮಾಡಿರಬಹುದು ಎಂದು ಪೋಲಿಸ್ ಮೂಲಗಳು ಸಂಶಯಿಸಿದೆ.
ದರೋಡೆ ನಡೆದ ಸಂದರ್ಭದಲ್ಲಿ ಬ್ಯಾಂಕಿನಲ್ಲಿ 12 ಮಂದಿ ಕೆಲಸ ಮಾಡುತ್ತಿದ್ದು ಯಾರೊಬ್ಬರಿಗೂ ಹಾನಿಯಾಗಿಲ್ಲ. ಈ ಸಮಯದಲ್ಲಿ ಭ್ಯಾಂಕಿನ ಭದ್ರತಾ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದವೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.