ಪೊಲೀಸರ ಗುಂಡಿಗೆ ಬಲಿಯಾದ ತಿವಾರಿ ಕುಟುಂಬಕ್ಕೆ 40 ಲಕ್ಷ ನಗದು: ಸಿಎಂ ಯೋಗಿ ಭರವಸೆ

Published : Oct 02, 2018, 07:46 AM IST
ಪೊಲೀಸರ ಗುಂಡಿಗೆ ಬಲಿಯಾದ ತಿವಾರಿ ಕುಟುಂಬಕ್ಕೆ 40 ಲಕ್ಷ ನಗದು: ಸಿಎಂ ಯೋಗಿ ಭರವಸೆ

ಸಾರಾಂಶ

ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ವಿವೇಕ್‌ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ನೆರವು ಪ್ರಕಟಿಸಿದ್ದಾರೆ. 

ಲಖನೌ[ಅ.02]: ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್‌ ಸಂಸ್ಥೆಯ ಉದ್ಯೋಗಿ ವಿವೇಕ್‌ ತಿವಾರಿ ಕುಟುಂಬಕ್ಕೆ ಉತ್ತರಪ್ರದೇಶ ಸರ್ಕಾರ ವಿವಿಧ ನೆರವು ಘೋಷಿಸಿದೆ. ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ

ವಿವೇಕ್‌ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ನೆರವು ಪ್ರಕಟಿಸಿದ್ದಾರೆ. 

ಇದರನ್ವಯ, ವಿವೇಕ್‌ರ ಪತ್ನಿ ಕಲ್ಪನಾಗೆ ಲಖನೌ ಮುನ್ಸಿಪಲ್‌ ಕಚೇರಿಯಲ್ಲಿ ನೌಕರಿ, ಕುಟುಂಬಕ್ಕೆ ಒಂದು ಮನೆ, ತಿವಾರಿ ಇಬ್ಬರು ಮಕ್ಕಳು ಮತ್ತು ತಿವಾರಿ ತಾಯಿ ಹೆಸರಲ್ಲಿ ತಲಾ 5 ಲಕ್ಷ ರು. ಠೇವಣಿ ಇಡಲಾಗುವುದು, ಕುಟುಂಬಕ್ಕೆ 25 ಲಕ್ಷ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಯೋಗಿ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?