
ಮಂಡ್ಯ(ಅ.12): ಇಂದಿರಾ ಕ್ಯಾಟೀನ್ ಪರ್ಯಾಯವಾಗಿ ಅಪ್ಪಾಜಿ ಕ್ಯಾಟೀನ್ ಒಂದು ಹೆಚ್ಚೆ ಮುಂದು ಹೋಗಿ ಸಕ್ಕರೆ ನಗರಿ ಮಂಡ್ಯದಲ್ಲಿ ಇಂದು ರಾಜ್ಯದ ಎರಡನೇ ಅಪ್ಪಾಜಿ ಕ್ಯಾಂಟೀನ್'ಅನ್ನು ಆರಂಭಿಸಿದೆ.
ಮಂಡ್ಯದ ಮಹಾವೀರ್ ವೃತ್ತದಲ್ಲಿ ಈ ಕ್ಯಾಂಟೀನ್ ಆರಂಭಗೊಂಡಿದ್ದು ಸಾರ್ವಜನಿಕರಿಗೆ 10 ರೂಗೆ ಊಟ ತಿಂಡಿ 5 ರೂ.ಗೆ ಕಾಫಿ ಇಲ್ಲಿ ದೊರೆಯುಲಿದೆ. ಮಂಡ್ಯದ ಶಂಕರ ನಗರದ ನಾಗೇಶ್ ಮತ್ತು ಗೊರವಾಲೆಯ ನಾಗೇಶ್ ಎಂಬ ಇಬ್ಬರು ಸ್ನೇಹಿತರು ಮಾಜಿ ಪ್ರಧಾನಿ ದೇವೇಗೌಡರ ಮೇಲಿನ ಅಭಿಮಾನದಿಂದ ಈ ಕ್ಯಾಂಟೀನ್ ಆರಂಭಿಸಿದ್ದಾರೆ. ಮಂಡ್ಯದ ಸಂಸದ ಪುಟ್ಟರಾಜು, ಕ್ಯಾಂಟೀನ್'ಗೆ ಅಪ್ಪಾಜಿ ಕ್ಯಾಂಟೀನ್ ಎಂದು ಉದ್ಘಾಟಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ನಾಯಕರಾದ ಡಾ. ಕೃಷ್ಣ, ನಾಯಕಿ ಪ್ರಭಾವತಿ ಜಯರಾಂ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.