ನಾರಾಯಣಸ್ವಾಮಿಹೊರಮಾವಿನಲ್ಲಿರುವ ಬಿಬಿಎಂಪಿಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ.
ಬೆಂಗಳೂರು(ಫೆ.20): ಪಾಲಿಕೆ ಕಚೇರಿಗೆ ನುಗ್ಗಿ ಖಾತೆ ಹಂಚಿಕೆ ಮಾಡಿಕೊಡದಿದ್ದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿ ದರ್ಪ ತೋರಿದ್ದ ಶಾಸಕ ಭೈರತಿ ಬಸವರಾಜು ಆಪ್ತ ನಾರಾಯಣ ಸ್ವಾಮಿಯನ್ನು 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ನಾರಾಯಣಸ್ವಾಮಿ ಹೊರಮಾವಿನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ. ಉದ್ಯಮಿಯೊಬ್ಬರ ಪುತ್ರನ ಮೇಲೆ ಶಾಂತಿ ನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಹಲ್ಲೆ ನಡೆಸಿ ಈಗ ಬಂಧನಕ್ಕೊಳಗಾಗಿದ್ದಾನೆ.