
ನವದೆಹಲಿ(ಜ.18): ಸೇನೆಯ ಕೆಟ್ಟ ಊಟದ ವ್ಯವಸ್ಥೆ ಬಗ್ಗೆ ಬಿಎಸ್`ಎಫ್ ಯೋಧ ತೇಜ್ ಬಹದ್ದೂರ್ ಇತ್ತೀಚೆಗೆ ವಿಡಿಯೋ ಮೂಲಕ ದೇಶದ ಗಮನ ಸೆಳೆದಿದ್ದರು. ಬಳಿಕ ಸಿಆರ್`ಪಿಎಫ್ ಯೋಧರೂ ಸಹ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ಯೋಧರ ಈ ಸ್ಥಿತಿ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೋಶಿಯಲ್ ಮೀಡಿಯಾದಲ್ಲಿ ಸೇನೆಯ ಸಮಸ್ಯೆಗಳನ್ನ ಬಹಿರಂಗಪಡಿಸುವ ಬದಲು ನಮ್ಮ ಬಳಿಗೆ ತನ್ನಿ ಎಂದು ತಾಕೀತು ಮಾಡಿದ್ದರು. ಸಮಸ್ಯೆಗಳಿಗೆ ಸೋಶಿಯಲ್ ಮೀಡಿಯಾವನ್ನ ವೇದಿಕೆಯಾಗಿ ಬಳಸದಂತೆ ತಾಕೀತು ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಇಂತಹುದ್ಧೇ ಮತ್ತೊಂದು ವಿಡಿಯೋ ಆನ್`ಲೈನ್`ನಲ್ಲಿ ಬಹಿರಂಗವಾಗಿದೆ.
ನಾಲ್ಕೈದು ಯೋಧರು ಒಟ್ಟಿಗೆ ನಿಂತಿದ್ದು ನೊಂದ ಯೋಧನೊಬ್ಬ ಹಾಡಿನ ಮೂಲಕ ತಮ್ಮ ದಯನೀಯ ಸ್ಥಿತಿಯನ್ನ ತೋರ್ಪಡಿಸಿದ್ದಾನೆ. ಸರಿಯಾಗಿ ರಜೆ ನೀಡದಿರುವ ಬಗ್ಗೆ ಯೋಧ ಲವತ್ತುಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.