'ಜಲಪಾತ ನೋಡಲು ಹೋಗಿ ದಟ್ಟ ಕಾಡಿನಲ್ಲಿ ಕಳೆದು ಹೋಗಿದ್ದ ಮತ್ತೊಂದು ಚಾರಣಿಗರ ತಂಡ'

Published : Sep 20, 2016, 06:17 AM ISTUpdated : Apr 11, 2018, 12:43 PM IST
'ಜಲಪಾತ ನೋಡಲು ಹೋಗಿ ದಟ್ಟ ಕಾಡಿನಲ್ಲಿ ಕಳೆದು ಹೋಗಿದ್ದ ಮತ್ತೊಂದು ಚಾರಣಿಗರ ತಂಡ'

ಸಾರಾಂಶ

ಬೆಳಗಾವಿ(ಸೆ.20): ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಅರಣ್ಯದಲ್ಲಿರುವ ವಜ್ರಾ ಜಲಪಾತ ನೋಡಲು ಹೋಗಿ ಕಣ್ಮರೆಯಾಗಿದ್ದ ಯುವಕರು ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. 

ಕಣ್ಮರೆಯಾಗಿದ್ದ ಯುವಕರು ಜೋಯಡಾ ತಾಲೂಕಿನ ಗೋಬ್ರಾ-ನಾಲಾ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ ಸ್ನೇಹಿತರು ಅರಣ್ಯ ಚಾರಣಕ್ಕೆ ಪ್ಲಾನ್ ಮಾಡಿದ್ದರು. ಆದರೆ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ, ಗೈಡ್ ಸಹಾಯವಿಲ್ಲದೇ ತಮ್ಮದೇ ಮಾರ್ಗದರ್ಶನದಲ್ಲಿ ಚಾರಣಕ್ಕೆ ತೆರಳಿದಾಗ ನಾಪತ್ತೆಯಾಗಿದ್ದರು. 

ಅದರಂತೆ ಏಳು ಜನ ಸ್ನೇಹಿತರು ನಿನ್ನೆ ಸಂಜೆ ನಾಲ್ಕು ಬೈಕ್ ಮೇಲೆ ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಚಾರಣ ಮತ್ತು ವಜ್ರಾ ಜಲಪಾತ ನೋಡುವುದಕ್ಕಾಗಿ ಒಳಗೆ ಹೋಗಿದ್ದರು. ಆದರೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಯುವಕರು ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡಿದ್ದರು. 

ಕಣ್ಮರೆಯಾದ ಯುವಕರನ್ನ ಪತ್ತೆ ಹಚ್ಚಲು ಬೆಳಗಾವಿ ವಿಭಾಗದ ಡಿಎಫಓ ಬಸವರಾಜ ಪಾಟೀಲ ನೇತೃತ್ವದ ತಂಡ ಶೋಧ ನಡೆಸಿ ಯುವಕರನ್ನ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆದುಕೊಂಡು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೋಂಡಿ ಬೀಚಲ್ಲಿ ಗುಂಡಿಗೂ ಮುನ್ನ ಬಾಂಬ್‌ ಎಸೆದಿದ್ದ ಉಗ್ರ ಅಪ್ಪ-ಮಗ
ಪಿಎಸ್‌ಐ ನೇಮಕಾತಿಗೆ ಗೃಹ ಇಲಾಖೆ ರೆಡ್‌ ಸಿಗ್ನಲ್‌: ಎಎಸ್‌ಐಗಳಿಗೆ ಮುಂಬಡ್ತಿ