ಬೆಂಗಳೂರಿನಲ್ಲಿ ಬಿತ್ತು ಮತ್ತೊಂದು ಬಿಜೆಪಿ ಮುಖಂಡನ ಹೆಣ: ಬೈಕಲಿ ಬಂದ್ರೂ ಕೊಂದ್ರೂ ಹೋದ್ರೂ...!

Published : Nov 09, 2016, 09:23 AM ISTUpdated : Apr 11, 2018, 01:02 PM IST
ಬೆಂಗಳೂರಿನಲ್ಲಿ ಬಿತ್ತು ಮತ್ತೊಂದು ಬಿಜೆಪಿ ಮುಖಂಡನ ಹೆಣ: ಬೈಕಲಿ ಬಂದ್ರೂ ಕೊಂದ್ರೂ ಹೋದ್ರೂ...!

ಸಾರಾಂಶ

ಚಿಕ್ಕ ತಿಮ್ಮೇಗೌಡ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಆಮಂತ್ರಣ ಪತ್ರಿಕೆಗಳನ್ನ ಹಂಚಿ ಮನೆಗೆ ವಾಪಸ್ ಆಗ್ತಿದ್ರು. ಈ ವೇಳೆ ಹಿಂದಿನಿಂದ ಬಂದ ಮೂವರು ತಲೆಗೆ ರಾಡ್ ನಿಂದ ಹೊಡೆದು ಬೈಕ್ ನಿಂದ ಕೆಳಗೆ ಬೀಳಿಸಿದ್ದಾರೆ. 

ಬೆಂಗಳೂರು(ನ.09): ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದೆ. ನಗರದ ಸುಂಕದಕಟ್ಟೆಯ ಹೆಗ್ಗನಹಳ್ಳಿಯ ಬಿಜೆಪಿ ಮುಖಂಡ ಚಿಕ್ಕ ತಿಮ್ಮೇಗೌಡರನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಮನೆಯ ಬಳಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಚಿಕ್ಕ ತಿಮ್ಮೇಗೌಡ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಆಮಂತ್ರಣ ಪತ್ರಿಕೆಗಳನ್ನ ಹಂಚಿ ಮನೆಗೆ ವಾಪಸ್ ಆಗ್ತಿದ್ರು. ಈ ವೇಳೆ ಹಿಂದಿನಿಂದ ಬಂದ ಮೂವರು ತಲೆಗೆ ರಾಡ್ ನಿಂದ ಹೊಡೆದು ಬೈಕ್ ನಿಂದ ಕೆಳಗೆ ಬೀಳಿಸಿದ್ದಾರೆ. 

ಕೆಳಗೆ ಬೀಳ್ತಿದ್ದ ಹಾಗೆ ಎದೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಿಕ್ಕತಿಮ್ಮೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದು,ಹಂತಕರ ಪತ್ತೆಗಾಗಿ 3ವಿಶೇಷ ತಂಡಗಳನ್ನ ರಚನೆ ಮಾಡಲಾಗಿದೆ. .
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!