ಬೇರೆ ಪಕ್ಷಕ್ಕೂ ನಿಮಗೂ ಏನು ವ್ಯತ್ಯಾಸ ಇದೆ - ಕೇಜ್ರಿಗೆ ಅಣ್ಣಾ ಹಜಾರೆ ಖಡಕ್ ಪ್ರಶ್ನೆ

Published : Dec 25, 2016, 11:45 AM ISTUpdated : Apr 11, 2018, 01:09 PM IST
ಬೇರೆ ಪಕ್ಷಕ್ಕೂ ನಿಮಗೂ ಏನು ವ್ಯತ್ಯಾಸ ಇದೆ - ಕೇಜ್ರಿಗೆ ಅಣ್ಣಾ ಹಜಾರೆ ಖಡಕ್ ಪ್ರಶ್ನೆ

ಸಾರಾಂಶ

`ಆಮ್ ಆದ್ಮಿ ಪಕ್ಷಕ್ಕೆ ಎಲ್ಲ ದಾನಿಗಳು ನೀಡಿರುವ ದಾನದ ಬಗ್ಗೆ ಮಾಹಿತಿ ಪ್ರದರ್ಶಿಸುತ್ತೇವೆ ಎಂದು ನೀವು ಮಾತಿ ಕೊಟ್ಟಿದ್ದೀರಿ. ಜೂನ್ 2016ರಿಂದ ನಿಮ್ಮ ವೆಬ್ ಸೈಟ್`ನಲ್ಲಿ ಈ ಕುರಿತ ಮಾಹಿತಿ ಮಾಯವಾಗಿರುವ ಬಗ್ಗೆ ನನಗೆ ಸಾಮಾಜಿಕ ಕಾರ್ಯಕರ್ತರು ಬರೆದು ತಿಳಿಸಿದ್ದಾರೆ ಎಂದು ಆಮ್ ಆದ್ಮಿಯ ರಾಷ್ಟ್ರೀಯ ಸಂಚಾಲಕರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ತಿಳಿಸಿದ್ಧಾರೆ.

ನವದೆಹಲಿ(ಡಿ.25): ಹಲವು ದಿನಗಳ ಬಳಿಕ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಆಮ್ ಆದ್ಮಿ ವರಿಷ್ಠ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಮ್ ಆದ್ಮಿ ವೆಬ್ ಸೈಟ್`ನಿಂದ ದಾನಿಗಳ ಹೆಸರನ್ನ ತೆಗೆದಿರುವ ಬಗ್ಗೆ ಪ್ರಶ್ನಿಸಿರುವ ಅಣ್ಣಾ ಹಜಾರೆ, ಬೇರೆ ಪಕ್ಷಗಳಿಗೂ ನಿಮಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದಾರೆ. ಹಲವು ಹೋರಾಟಗಾರರು ಈ ಬಗ್ಗೆ ನನಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಹಜಾರೆ ಹೇಳಿದ್ದಾರೆ.

`ಆಮ್ ಆದ್ಮಿ ಪಕ್ಷಕ್ಕೆ ಎಲ್ಲ ದಾನಿಗಳು ನೀಡಿರುವ ದಾನದ ಬಗ್ಗೆ ಮಾಹಿತಿ ಪ್ರದರ್ಶಿಸುತ್ತೇವೆ ಎಂದು ನೀವು ಮಾತಿ ಕೊಟ್ಟಿದ್ದೀರಿ. ಜೂನ್ 2016ರಿಂದ ನಿಮ್ಮ ವೆಬ್ ಸೈಟ್`ನಲ್ಲಿ ಈ ಕುರಿತ ಮಾಹಿತಿ ಮಾಯವಾಗಿರುವ ಬಗ್ಗೆ ನನಗೆ ಸಾಮಾಜಿಕ ಕಾರ್ಯಕರ್ತರು ಬರೆದು ತಿಳಿಸಿದ್ದಾರೆ ಎಂದು ಆಮ್ ಆದ್ಮಿಯ ರಾಷ್ಟ್ರೀಯ ಸಂಚಾಲಕರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ತಿಳಿಸಿದ್ಧಾರೆ.

`ಬದಲಾವಣೆ ತರುವುದಾಗಿ ನನಗೂ ಸೇರಿದಂತೆ ಈ ಸಮಾಜಕ್ಕೆ ನೀನು ಮಾತು ಕೊಟ್ಟಿದ್ದೆ. ನೀನು ನಿನ್ನ ಮಾತಿನಂತೆ ನಡೆದುಕೊಳ್ಳದಿರುವ ಬಗ್ಗೆ ನನಗೆ ಅತೀವ ದುಃಖವಾಗಿದೆ' ಎಂದು ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!
Bengaluru: ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!