ಕಾಂಗ್ರೆಸ್ ಮಾಜಿ ಶಾಸಕ ಉಮೇಶ್ ಭಟ್ ನಿಧನ

Published : Aug 13, 2019, 09:46 PM ISTUpdated : Aug 13, 2019, 10:46 PM IST
ಕಾಂಗ್ರೆಸ್ ಮಾಜಿ ಶಾಸಕ ಉಮೇಶ್ ಭಟ್ ನಿಧನ

ಸಾರಾಂಶ

ಮಾಜಿ ಶಾಸಕ ಉಮೇಶ್ ಭಟ್ ನಿಧನ| ಹೃದಯಾಘಾತದಿಂದ ಕೊನೆಯುಸಿರೆಳೆದ ಉಮೇಶ್ ಭಟ್ | ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನ| ಉಮೇಶ್ ಭಟ್ ಅಂಕೋಲ ಕ್ಷೇತ್ರದ ಮಾಜಿ ಶಾಸಕ|

ಬೆಂಗಳೂರು/ಉತ್ತರಕನ್ನಡ, [ಆ.13]:  ಅಂದಿನ ಅಂಕೋಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಭಟ್ ಅವರು ಇಂದು [ಮಂಗಳವಾರ] ಸಂಜೆ ವಿಧಿವಶರಾಗಿದ್ದಾರೆ.

ಅಂಕೋಲದ ಬಾವಿಕೇರಿ ಗ್ರಾಮದ ಉಮೇಶ್ ಭಟ್ (70) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

1989ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 25122 ಮತಗಳಿಂದ ಗೆಲುವು ಸಾಧಿಸಿದ್ದರು.

ಉಮೇಶ್ ಭಟ್ ಅವರು ಸಂಯುಕ್ತ ಕರ್ನಾಟಕ ಆಡಳಿತ ಮಂಡಳಿಯ ಟ್ರಸ್ಟಿಯಾಗಿದ್ದರು. ಈಗ ಅಂಕೋಲ ವಿಧಾನಸಭೆ ಕ್ಷೇತ್ರವಿಲ್ಲ. ಕ್ಷೇತ್ರ ಮರು ವಿಂಗಡನೆ ಸಂದರ್ಭದಲ್ಲಿ ಅಂಕೋಲ ಬೇರೆ-ಬೇರೆ ಕ್ಷೇತ್ರಗಳಿಗೆ ಹಂಚಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು
ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ