ಕೈಗೆ ಗಾಂಧಿ ಹೆಸರು ಬೇಕು: ಶಾಸ್ತ್ರಿ ಪುತ್ರನ ಮಾತು ಕೇಳಬೇಕು!

Published : Jul 19, 2019, 03:51 PM ISTUpdated : Jul 19, 2019, 03:52 PM IST
ಕೈಗೆ ಗಾಂಧಿ ಹೆಸರು ಬೇಕು: ಶಾಸ್ತ್ರಿ ಪುತ್ರನ ಮಾತು ಕೇಳಬೇಕು!

ಸಾರಾಂಶ

ಗಾಂಧಿ ಹೆಸರಷ್ಟೇ ಕಾಂಗ್ರೆಸ್ ಉಳಿಸಬಲ್ಲದು ಎಂದ ಅನಿಲ್ ಶಾಸ್ತ್ರಿ| ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಗ ಅನಿಲ್ ಶಾಸ್ತ್ರಿ| ‘ನೆಹರೂ, ಗಾಂಧಿ ಪರಿವಾರದ ವ್ಯಕ್ತಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು’| ಕಾಂಗ್ರೆಸ್ ಸಣ್ಣಪುಟ್ಟ ಪ್ರಾಂತೀಯ ಪಕ್ಷಗಳಾಗಿ ಹೋಳಾಗಲಿದೆ ಎಂದು ಎಚ್ಚರಿಸಿದ ಅನಿಲ್| ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕೆಂದ ಅನಿಲ್| 

ನವದೆಹಲಿ(ಜು.19): ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಹೆಸರು ಅನಿವಾರ್ಯವಾಗಿದ್ದು, ನೆಹರೂ, ಗಾಂಧಿ ಪರಿವಾರದ ವ್ಯಕ್ತಿಯೇ ಪಕ್ಷದ ಅಧ್ಯಕ್ಷರಾಗಿರಬೇಕು ಎಂದು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಗ ಅನಿಲ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಪರಿವಾರಕ್ಕೆ ಸೇರಿದ ವ್ಯಕ್ತಿಯೇ ಅಧ್ಯಕ್ಷರಾಗಬೇಕು. ಇಲ್ಲದಿದ್ದರೆ ಪಕ್ಷ ಹಲವು ಸಣ್ಣಪುಟ್ಟ ಪ್ರಾಂತೀಯ ಪಕ್ಷಗಳಾಗಿ ಹೋಳಾಗಲಿದೆ ಎಂದು ಅನಿಲ್ ಶಾಸ್ತ್ರಿ ಎಚ್ಚರಿಸಿದ್ದಾರೆ.

ಪಕ್ಷದ ಹೈಕಮಾಂಡ್ ಸದೃಢವಾಗಿರದಿದ್ದರೆ ಪಕ್ಷ ಹಲವು ಸಣ್ಣಪುಟ್ಟ ಪ್ರಾಂತೀಯ ಪಕ್ಷಗಳಾಗಿ ಒಡೆಯಲಿದೆ ಎಂದಿರುವ ಅನಿಲ್, ಟಿಎಂಸಿ, ಎನ್’ಸಿಪಿ, ವೈಎಸ್’ಆರ್’ಪಿ ಪಕ್ಷಗಳು ಇದಕ್ಕೆ ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂದು ಹೇಳಿರುವ ಅನಿಲ್, ಪ್ರಿಯಾಂಕಾ ಅವರನ್ನು ಹೊರತುಪಡಿಸಿದರೆ ಪಕ್ಷದ ಚುಕ್ಕಾಣಿ ಹಿಡಿಯಬಲ್ಲ ಕ್ಷಮತೆ ಸದ್ಯ ಯಾರಲ್ಲೂ ಇಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು