ನೆರೆ ಸಂತ್ರಸ್ತರಿಗೆ ಬೋಟ್ ಏರಲು ಮೆಟ್ಟಿಲಾದ ವ್ಯಕ್ತಿಗೆ ಕಾರ್ ಗಿಫ್ಟ್

Published : Sep 12, 2018, 11:15 AM ISTUpdated : Sep 19, 2018, 09:23 AM IST
ನೆರೆ ಸಂತ್ರಸ್ತರಿಗೆ ಬೋಟ್ ಏರಲು ಮೆಟ್ಟಿಲಾದ ವ್ಯಕ್ತಿಗೆ ಕಾರ್ ಗಿಫ್ಟ್

ಸಾರಾಂಶ

ಕೇರಳದಲ್ಲಿ ಭಾರೀ ಮಳೆ ಸುರಿದು ಜನಜೀವನ ತತ್ತರಿಸಿದ್ದ ವೇಳೆ ತನ್ನ ಜೀವದ ಹಂಗು ತೊರೆದು ಕಾರ್ಯನಿರ್ಹಿಸಿದ್ದ ಮೀನುಗಾರರೋರ್ವರಿಗೆ ಇದೀಗ ಬಂಪರ್ ಗಿಫ್ಟ್ ನೀಡಲಾಗಿದೆ. 

ಕಲ್ಲಿಕೋಟೆ: ಕೇರಳದಲ್ಲಿ ಇತ್ತೀಚೆಗೆ ಭಾರೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಈ ವೇಳೆ ಇಲ್ಲಿನ ಜನತೆ ತತ್ತರಿಸಿದ್ದು , ಅನೇಕರು ಸ್ವಯಂ ಪ್ರೇರಿತವಾಗಿ ಜನರ ನೆರವಿಗೆ ನಿಂತಿದ್ದರು. ಅಂತವರಲ್ಲಿ ಮೀನುಗಾರರೋರ್ವರು ಕೂಡ ತಮ್ಮ ಪ್ರಾಣದ ಹಂಗನ್ನೇ ತೊರೆದು ಪ್ರವಾಹ ಪೀಡಿತರ ರಕ್ಷಣೆಯಲ್ಲಿ ತೊಡಗಿದ್ದರು. 

ಅವರಿಗೆ ಇದೀಗ ಬಂಪರ್ ಗಿಫ್ಟ್ ಒಂದು ಲಭ್ಯವಾಗಿದೆ.   ಮಹಿಳೆಯರು, ವೃದ್ಧರಿಗೆ ಬೋಟ್ ಏರಲು ತನ್ನ ಬೆನ್ನನ್ನೇ ಮೆಟ್ಟಿಲು ರೀತಿ ಮಾಡಿ ನೆರವಾಗಿದ್ದ ಮಲಪ್ಪುರಂನ ಜೈಸಲ್ ಎಂಬ ಮೀನುಗಾರನಿಗೆ ಮಹೀಂದ್ರಾ ಕಂಪನಿ ಕಾರನ್ನು ಉಡುಗೊರೆಯಾಗಿ ನೀಡಿದೆ. 

 ಇತ್ತೀಚೆಗಷ್ಟೇ ಬಿಡುಗಡೆಯಾದ ಮರಾಜೋ ಕಾರನ್ನು ಉಡುಗೊರೆಯಾಗಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು