
ಬೆಂಗಳೂರು (ಆ.16): ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆ ಇಂದಿರಾ ಕ್ಯಾಂಟಿನ್ ನನ್ನು ಉದ್ಘಾಟನೆ ಮಾಡಿದ ರಾಹುಲ್ ಗಾಂಧಿ, ಮಾತನಾಡುತ್ತಾ, ಪ್ರತಿಯೊಬ್ಬ ಬಡವನೂ ತಾನು ಸಿದ್ದರಾಮಯ್ಯ ಸರ್ಕಾರವಿರುವ ಕರ್ನಾಟಕದಲ್ಲಿದ್ದೇನೆ ಎಂದು ಭಾವಿಸಿಕೊಳ್ಳಬೇಕು. ಬಡವರ ಹಸಿವನ್ನು ನೀಗಿಸುವುದೇ ನಮ್ಮ” ಅಮ್ಮಾ ಕ್ಯಾಂಟಿನ್ ಆಆಅ.... ಇಂದಿರಾ ಕ್ಯಾಂಟೀನ್’ನ ಆಶಯವಾಗಿದೆ ಎಂದು ರಾಹುಲ್ ಗಾಂಧಿ ಬಾಯಿ ತಪ್ಪಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಆರಂಭವಾಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯು ಬಡವರ. ಶ್ರಮಿಕರ ಹಸಿವನ್ನು ನೀಗಿಸುವ ಉದ್ದೇಶವನ್ನು ಹೊಂದಿದೆ. ನೆರೆಯ ರಾಜ್ಯ ತಮಿಳು ನಾಡಿನ ಅಮ್ಮಾ ಕ್ಯಾಂಟೀನ್ ಯೋಜನೆಯನ್ನೇ ನಕಲು ಮಾಡಲಾಗಿದೆ ಎಂದು ಕೆಲವರು ಟೀಕಿಸುತ್ತಾರೆ/ ಜನಪರ ಯೋಜನೆಗಳನ್ನು ನಾವು ಜಾರಿಗೆ ತರುವಲ್ಲಿ ತಪ್ಪೇನಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿರಾ ಗಾಂಧಿ ಕ್ಯಾಂಟಿನ್’ನಲ್ಲಿ ಶುಚಿತ್ವವನ್ನು ಕಾಪಾಡಿದ್ದು, ಉತ್ತಮ ಗುಣಮಟ್ಟದ ಟವನ್ನು ನೀಡಲಾಗುತ್ತದೆ. ನಾನು ಊಟ ಮಾಡಿದ್ದೇನೆ. ಯಾವ ಫೈವ್ ಸ್ಟಾರ್ ಹೋಟೆಲ್’ಗೂ ಕಮ್ಮಿಯಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.