ಯುವ ಮೋರ್ಚಾ ಕಾರ್ಯವೈಖರಿಯ ವಿವರಣೆ ಕೇಳಿದ ಶಾ: ಪ್ರತಾಪ್ ಸಿಂಹ ಉತ್ತರ ಕೇಳಿ ಅಮಿತ್ ಶಾ ಕೆಂಡಾಮಂಡಲ

Published : Aug 13, 2017, 01:16 PM ISTUpdated : Apr 11, 2018, 01:07 PM IST
ಯುವ ಮೋರ್ಚಾ ಕಾರ್ಯವೈಖರಿಯ ವಿವರಣೆ ಕೇಳಿದ ಶಾ: ಪ್ರತಾಪ್ ಸಿಂಹ ಉತ್ತರ ಕೇಳಿ ಅಮಿತ್ ಶಾ ಕೆಂಡಾಮಂಡಲ

ಸಾರಾಂಶ

ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಮುಖಂಡರ ಸಭೆ ನಡೆಸಿದ ಅಮಿತ್​ ಶಾ  ಬಿಜೆಪಿ  ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್​ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ.  ಯುವ ಮೋರ್ಚಾ ಕಾರ್ಯವೈಖರಿ ಬಗ್ಗೆ  ಶಾ ವಿವರಣೆ ಕೇಳಿದ್ದಾರೆ. 

ಬೆಂಗಳೂರು(ಆ.13): ಮೂರು ದಿನಗಳ ರಾಜ್ಯ  ಪ್ರವಾಸದಲ್ಲಿರುವ  ಬಿಜೆಪಿ  ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆ  ರಾಜ್ಯ  ಬಿಜೆಪಿ ನಾಯಕರಿಗೆ ಸರಿಯಾಗೇ  ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ  ಹೋಟೆಲ್'ನಲ್ಲಿ  ನಡೆದ ಕೋರ್ ಕಮಿಟಿ ಸಭೆಯಲ್ಲಿ  ಭಾಗಿಯಾಗಿದ್ದ  ರಾಜ್ಯ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈಯುತ್ತ ಚಾಟಿ ಬೀಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ  ದಾಳಿ ನಡೆದಾಗ ರಾಜ್ಯದಲ್ಲಿ ಇದ್ದು ನೀವು ಏನು  ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ .

ಇನ್ನು  ಇದೇ ಸಂದರ್ಭದಲ್ಲಿ  ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಮುಖಂಡರ ಸಭೆ ನಡೆಸಿದ ಅಮಿತ್​ ಶಾ  ಬಿಜೆಪಿ  ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್​ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ.  ಯುವ ಮೋರ್ಚಾ ಕಾರ್ಯವೈಖರಿ ಬಗ್ಗೆ  ಶಾ ವಿವರಣೆ ಕೇಳಿದ್ದಾರೆ. 

ಇದಕ್ಕೆ  ಉತ್ತರಿಸಿದ  ಪ್ರತಾಪ್​ ಸಿಂಹ  ಬೂತ್​ ಮಟ್ಟದಲ್ಲಿ ಹಾಗೂ ಮಂಡಲ ಸಮಿತಿ ರಚಿಸಿದ್ದೇವೆ ಎಂದು ಉತ್ತರಿಸಿದ್ದಾರೆ.   ಪ್ರತಾಪ್​ ಸಿಂಹ ಉತ್ತರ ಕೇಳಿ  ಕೆಂಡಾಮಂಡಲರಾದ ಅಮಿತ್​ ಶಾ ,  ಯುವ ಮೋರ್ಚಾ ನಡೆಸುತ್ತಿದ್ದೀರಾ? ಇಲ್ಲ ಆಶ್ರಮ ನಡೆಸುತ್ತಿದ್ದೀರಾ? ಎಂದು  ಸಂಸದ ಪ್ರತಾಪ್​ ಸಿಂಹಗೆ  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ
ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ