ಚೀನಾ ವಿರುದ್ಧ ಸಿಡಿದೆದ್ದ ಏಕೈಕ ನಾಯಕ ಮೋದಿ

Published : Nov 19, 2017, 02:28 PM ISTUpdated : Apr 11, 2018, 01:00 PM IST
ಚೀನಾ ವಿರುದ್ಧ ಸಿಡಿದೆದ್ದ ಏಕೈಕ ನಾಯಕ ಮೋದಿ

ಸಾರಾಂಶ

ಪ್ರಧಾನಿ ಹೊಗಳಿದ ಅಮೆರಿಕ ಚಿಂತಕರ ಚಾವಡಿ

ವಾಷಿಂಗ್ಟನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಆರ್ಥಿಕ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೊಂಡಿದ್ದನ್ನು ಪ್ರಶ್ನಿಸಿದ ಏಕೈಕ ಮುತ್ಸದ್ದಿ ನಾಯಕರೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿ. ಈ ಬಗ್ಗೆ ಅಮೆರಿಕ ಕೂಡ ತುಟಿ ಪಿಟಕ್ಕೆನ್ನಲಿಲ್ಲ ಎಂದು ಅಮೆರಿಕದ ತಜ್ಞರೊಬ್ಬರು ಪ್ರಶಂಸಿಸಿದ್ದಾರೆ.

ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಅಮೆರಿಕದ ಹಡ್ಸನ್ ಇನ್ಸ್‌ಟಿಟ್ಯೂಟ್‌ನ ಚೀನಾ ವ್ಯವಹಾರಗಳ ಚಿಂತಕರ ಚಾವಡಿಯ ನಿರ್ದೇಶಕ ಮೈಕೆಲ್ ಪಿಲ್ಸ್ ಬರಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಈ ಮಹತ್ವಾಕಾಂಕ್ಷಿ ಆರ್ಥಿಕ ಹೆದ್ದಾರಿ ನಿರ್ಮಾಣ ಯೋಜನೆಯ ವಿರುದ್ಧ ದನಿ ಎತ್ತಿದ್ದು ಮೋದಿ ಮತ್ತು ಅವರ ಸಹೋದ್ಯೋಗಿಗಳು ಮಾತ್ರ. ಈ ಯೋಜನೆಯಿಂದ ಭಾರತದ ಸಾರ್ವಭೌಮತೆಗೆ ಧಕ್ಕೆ ಬರುತ್ತದೆ ಎಂದರು.

ಆದರೆ ಈ ಯೋಜನೆಯ ಬಗ್ಗೆ ಅಮೆರಿಕ ಸರ್ಕಾರ ಈವರೆಗೂ ಮೌನ ಮುರಿದಿಲ್ಲ ಎಂದ ಅವರು, ಅಮೆರಿಕದ ಸೂಕ್ಷ್ಮವ್ಯಾಪಾರ ಗುಟ್ಟುಗಳನ್ನು ಚೀನಾ ಕದಿಯುತ್ತಿದೆ. ಈ ಮೂಲಕ ಬೌದ್ಧಿಕ ಸ್ವಾತಂತ್ರ್ಯವನ್ನು ಕದಿಯುತ್ತಿದೆ ಎಂದು ಆರೋಪಿಸಿದರು.

ಶ್ರೀಲಂಕಾದಲ್ಲಿ ಬಂದರು ನಿರ್ಮಾಣಕ್ಕೆ ಸಹಾಯ ಮಾಡುವ ನೆಪದಲ್ಲಿ, ಅಲ್ಲಿನ ಬಂದರುಗಳನ್ನು ಚೀನಾ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದೆ ಎಂದೂ ಪಿಲ್ಸ್ ಬರಿ ಆತಂಕ ವ್ಯಕ್ತಪಡಿಸಿದರು. ಚೀನಾದ ಗಡಿ ರಸ್ತೆ ನಿರ್ಮಾಣ ಯೋಜನೆಯಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯೂ ಬರುತ್ತದೆ. ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವ ಯೋಜನೆಯಾಗಿದ್ದು, ಇದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಮೋದಿ ಸರ್ಕಾರ ಪ್ರತಿಭಟಿಸಿತ್ತು.

ಚೀನಾದಲ್ಲಿ ನಡೆದ ಬೆಲ್ಟ್ ಆ್ಯಂಡ್ ರೋಡ್ ಫೋರಂನ ಶೃಂಗವನ್ನು ಬಹಿಷ್ಕರಿಸಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಒಮರ್ ಟಾಂಗ್
ದರ್ಶನ್ ಭೇಟಿಗೆ, ಪವಿತ್ರಾ ಗೌಡ ಪರಿಪರಿಯಾಗಿ ಬೇಡಿಕೊಂಡರೂ ಡಿಜಿಪಿ ಅಲೋಕ್ ಕುಮಾರ್ ನಿರಾಕರಿಸಿದ್ದೇಕೆ!