ಬೈಕ್ ಸವಾರನ ಜೀವ ತೆಗೆದ ‘ಜೀವ ರಕ್ಷಕ’ ಆಂಬುಲೆನ್ಸ್

By Internet DeskFirst Published Sep 17, 2016, 11:11 AM IST
Highlights

ಬೆಂಗಳೂರು(ಸೆ.17): ಜೀವ ಉಳಿಸಬೇಕಿದ್ದ ಆಂಬುಲೆನ್ಸ್ ವಾಹನ ಒನ್​ವೇನಲ್ಲಿ ಬಂದು ಅಮಾಯಕನ ಜೀವ ತೆಗೆದ ಘಟನೆ ಬೆಂಗಳೂರಿನ ಬಿಇಎಲ್ ಸರ್ಕಲ್ ಲೊಟ್ಟೆಗೊಲ್ಲಹಳ್ಳಿ ಬಳಿ ನಡೆದಿದೆ.  

ಒನ್ ವೇನಲ್ಲಿ ವೇಗವಾಗಿ ಬಂದ ಆಂಬುಲೆನ್ಸ್  ಬೈಕ್ ಸವಾರನಿಗೆ ಡಿಕ್ಕಿ  ಹೊಡೆದಿದೆ. ಪರಿಣಾಮ ಬೈಕ್​ ಸವಾರ ಎ.ಎನ್​ ಕುಮಾರ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಆಂಬುಲೆನ್ಸ್ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

Latest Videos

ಸ್ಥಳಕ್ಕೆ ಜಾಲಹಳ್ಳಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಜಾಲಹಳ್ಳಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

click me!