ಶ್ರೀನಗರದಲ್ಲಿ ವಿಮಾನಯಾನ ಕಂಪನಿಗಳಿಂದ ಜನರ ಸುಲಿಗೆ, 3000 ಟಿಕೆಟ್‌ಗೆ 22000 ರು.!

Published : Aug 04, 2019, 11:19 AM IST
ಶ್ರೀನಗರದಲ್ಲಿ ವಿಮಾನಯಾನ ಕಂಪನಿಗಳಿಂದ ಜನರ ಸುಲಿಗೆ, 3000 ಟಿಕೆಟ್‌ಗೆ 22000 ರು.!

ಸಾರಾಂಶ

ಶ್ರೀನಗರದಲ್ಲಿ ವಿಮಾನಯಾನ ಕಂಪನಿಗಳಿಂದ ಜನರ ಸುಲಿಗೆ, 3000 ಟಿಕೆಟ್‌ಗೆ 22000 ರು.!|  ಸರ್ಕಾ​ರದ ಆದೇ​ಶ​ದಿಂದ ಸ್ವಂತ ಊರಿಗೆ ಹಿಂದಿ​ರಿ​ಗಲು ಜನ ಏಕಾ​ಏಕಿ ಏರ್‌​ಪೋ​ರ್ಟ್‌ಗೆ ಧಾವಿಸಿದ ಯಾತ್ರಿಕರು

ನವ​ದೆ​ಹ​ಲಿ[ಆ.04]: ಅಮ​ರ​ನಾಥ ಯಾತ್ರೆಗೆ ಉಗ್ರರ ಕರಿ​ನೆ​ರಳು ಇರು​ವು​ದ​ರಿಂದ, ಯಾತ್ರೆ ಮೊಟ​ಕು​ಗೊ​ಳಿಸಿ ಆದಷ್ಟುಬೇಗ ಕಾಶ್ಮೀ​ರ ತ್ಯಜಿಸಿ ಎಂದು ಜಮ್ಮು ಕಾಶ್ಮೀ​ರ ಸರ್ಕಾರ ಆದೇಶಿಸಿ​ರು​ವ​ದ​ರಿಂದ ಯಾತ್ರಿ​ಕ​ರಿಗೆ ಸಂಕಷ್ಟ ಎದು​ರಾ​ಗಿದೆ. ಸರ್ಕಾ​ರದ ಆದೇ​ಶ​ದಿಂದ ಸ್ವಂತ ಊರಿಗೆ ಹಿಂದಿ​ರಿ​ಗಲು ಜನ ಏಕಾ​ಏಕಿ ಏರ್‌​ಪೋ​ರ್ಟ್‌ಗೆ ಧಾವಿ​ಸಿದ್ದು, ಶ್ರೀನ​ಗರ ಏರ್‌​ಪೋ​ರ್ಟ್‌ನಲ್ಲಿ ಟಿಕೆಟ್‌ಗಾಗಿ ಎರ​ಡ​ರಿಂದ ಮೂರು ದಿನ ಪರ​ದಾ​ಡು​ವಂತಾ​ಗಿದೆ.

ಇದರ ಜತೆ ವಿಮಾನ ಟಿಕೆ​ಟ್‌​ಗಳ ದರವೂ ಗಗ​ನ​ಕ್ಕೇ​ರಿದ್ದು, ಸಾಧಾ​ರ​ಣ​ವಾಗಿ ಶ್ರೀನ​ಗ​ರ​ದಿಂದ ದೆಹ​ಲಿಗೆ 3000 ರು. ಇದ್ದ ಟಿಕೆಟ್‌ ದರ 10,000 ದಿಂದ 22,000 ಕ್ಕೆ ಏರಿಕೆಯಾ​ಗಿದೆ. ಶ್ರೀನ​ಗ​ರ​ದಿಂದ ಜಮ್ಮು​ವಿಗೆ ವಿಮಾ​ನ​ಯಾನ ಸಂಸ್ಥೆ​ಗಳು 16000 ರು. ವಿಧಿ​ಸು​ತ್ತಿ​ದ್ದರೆ, ಶ್ರೀನ​ಗ​ರ​ದಿಂದ ಅಮೃ​ತ್‌​ಸರ್‌, ಜೈಪುರ ಹಾಗೂ ಚಂಢೀ​ಗ​ಡಕ್ಕೆ ಟಿಕೆಟ್‌ ದರ 10000 ರು. ದಿಂದ 19,000 ರು. ವರೆಗೆ ಏರಿ​ಕೆ​ಯಾ​ಗಿದೆ.

ಇದು ಯಾತ್ರಾ​ರ್ಥಿ​ಗ​ಳಿಗೆ ಗಾಯದ ಮೇಲೆ ಬರೆ ಎಳೆ​ದಂತಾ​ಗಿದೆ. ಕೆಲ ವಿಮಾ​ನ​ಯಾನ ಸಂಸ್ಥೆ​ಗಳು ಟಿಕೆಟ್‌ ರದ್ದು ಹಾಗೂ ಪ್ರಯಾಣ ಮುಂದೂ​ಡಿಕೆ ಶುಲ್ಕ​ವನ್ನು ರದ್ದು​ಗೊ​ಳಿ​ಸಿ​ ಯಾತ್ರಿ​ಗ​ಳಿಗೆ ರಿಲೀಫ್‌ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು