ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಬಂದಿದ್ದು ರಾಜಕೀಯ ಆಶ್ರಯ ಕೋರಿ!

Published : Aug 04, 2019, 11:07 AM IST
ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಬಂದಿದ್ದು ರಾಜಕೀಯ ಆಶ್ರಯ ಕೋರಿ!

ಸಾರಾಂಶ

ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಬಂದಿದ್ದು ರಾಜಕೀಯ ಆಶ್ರಯ ಕೋರಿ| ಕೋರಿಕೆ ತಿರಸ್ಕರಿಸಿ ಮರಳಿ ಕಳುಹಿಸಿದ ಭಾರತ

ತೂತ್ತುಕುಡಿ[ಆ.04]: ಯಾವುದೇ ಪೂರ್ವ ಮಾಹಿತಿ ನೀಡದೆ ಜಲ ಮಾರ್ಗ​ವಾಗಿ ಗುರು​ವಾರ ಭಾರ​ತಕ್ಕೆ ಬಂದಿದ್ದ, ಮಾಲ್ಡೀವ್ಸ್‌ನ ಮಾಜಿ ಉಪಾ​ಧ್ಯ​ಕ್ಷ​ ಅಹ್ಮದ್‌ ಅದೀಬ್‌ ಅಬ್ದುಲ್‌ ಗಫೂರ್‌ನನ್ನು ಭಾರತ ಮರಳಿ ಕಳು​ಹಿ​ಸಿದೆ. ಅವರು ರಾಜ​ಕೀಯ ಆಶ್ರಯ ಕೋರಿ ಭಾರ​ತಕ್ಕೆ ಬಂದಿ​ದ್ದರು, ಆದರೆ ಅವರ ಮನ​ವಿ​ಯ​ನ್ನು ತಿರ​ಸ್ಕ​ರಿ​ಸಿ ಮರಳಿ ಕಳು​ಹಿ​ಸ​ಲಾ​ಗಿದೆ ಎಂದು ಪೊಲೀ​ಸರು ತಿಳಿ​ಸಿ​ದ್ದಾರೆ.

ಯಾವುದೇ ದಾಖಲೆಗಳು ಇಲ್ಲದೆ ಒಂಭತ್ತು ಸಿಬ್ಬಂದಿ​ಗ​ಳೊಂದಿಗೆ ಸರಕು ಹಡ​ಗಿ​ನಲ್ಲಿ ಅಕ್ರ​ಮ​ವಾಗಿ ಭಾರ​ತಕ್ಕೆ ಪ್ರವೇಶ ಮಾಡಿದ್ದ ಅದೀ​ಬ್‌​ರನ್ನು ಹಡ​ಗಿ​ನಿಂದ ಇಳಿ​ಯಲು ಅವ​ಕಾಶ ಕೊಡದೇ ವಿಚಾ​ರಣೆ ನಡೆ​ಸ​ಲಾ​ಗಿತ್ತು. ವಿವಿಧ ಕೇಂದ್ರ ತನಿಖಾ ಸಂಸ್ಥೆ​ಗ​ಳೂ ಅದೀ​ಬ್‌​ರನ್ನು ತೀವ್ರ ವಿಚಾ​ರ​ಣೆಗೆ ಗುರಿ​ಪ​ಡಿ​ಸಿತ್ತು.

ಅದೀ​ಬ್‌​ರನ್ನು ಅದೇ ಹಡ​ಗಿ​ನಲ್ಲಿ ಅವ​ರನ್ನು ಹಿಂದು​ರು​ಗಿ​ಸ​ಲಾ​ಗಿದ್ದು, ಶುಕ್ರ​ವಾರ ಮಧ್ಯ​ರಾತ್ರಿ ಅವರು ತೂತ್ತುಕುಡಿಯಿಂದ ಮಾಲ್ಡೀ​ವ್ಸ್ಗೆ ಪ್ರಯಾಣ ಬೆಳೆ​ಸಿ​ದ್ದಾರೆ. ಕರಾ​ವಳಿ ರಕ್ಷಣಾ ಪಡೆ​ಗಳು ಭಾರ​ತೀಯ ಜಲ​ಸೀಮೆ ದಾಟು​ವ​ವ​ರೆಗೆ ನಿಗಾ ವಹಿ​ಸಿ​ತ್ತು ಎಂದು ಪೊಲೀಸ್‌ ಮೂಲಗಳು ತಿಳಿ​ಸಿವೆ. ಅದೀ​ಬ್‌ಗೆ ಮಾಲ್ಡೀ​ವ್‌್ಸ​ನಲ್ಲಿ ಜೀವ​ಬೆ​ದ​ರಿಕೆ ಇರು​ವು​ದ​ರಿಂದ ರಾಜ​ಕೀಯ ಆಶ್ರಯ ಕೋರಿ ಭಾರ​ತ​ಕ್ಕೆ ಬಂದಿ​ದ್ದರು ಎಂದು ಅದೀಬ್‌ ಪರ ವಕೀಲ ಹೇಳಿ​ದ್ದಾ​ನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು