
ನವದೆಹಲಿ (ಫೆ.13): ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆ ಕಂಬಳವನ್ನು ಸರ್ಕಾರ ಕಾನೂನುಬದ್ಧಗೊಳಿಸಿದ ಬೆನ್ನಲ್ಲೇ, ಪ್ರಾಣಿ ಹಕ್ಕುಗಳಿಗೆ ಹೋರಾಡುವ ಪೇಟಾ ಸಂಸ್ಥೆಯು ಈ ಕ್ರಮವನ್ನು ಭಾರತದ ಮೇಲೆ ಕಪ್ಪು ಚುಕ್ಕೆ ಎಂದು ಬಣ್ಣಿಸಿದೆ.
ಕಂಬಳವನ್ನು ಕಾನೂನುಬದ್ಧಗೊಳಿಸುವ ಕ್ರಮವು ನಾಚಿಕೆಗೇಡು ಹಾಗೂ ಭಾರತದ ಮೇಲೆ ಕಪ್ಪು ಚುಕ್ಕೆಯಾಗಿದೆಯೆಂದು ಹೇಳಿದೆ. ಈವರೆಗೆ ಭಾರತವು ಪ್ರಾಣಿದಯೆಗೆ ಹೆಸರುವಾಸಿಯಾಗಿತ್ತು. ಈ ಬೆಳವಣಿಗೆಗಳು ಭಾರತದ ಮಟ್ಟಿಗೆ ಹಿನ್ನಡೆಯಾಗಿವೆ ಎಂದು ಪೇಟಾ ಸಿ.ಇ.ಓ ಪೂರ್ವ ಜೋಶಿಪುರಾ ಹೇಳಿದ್ದಾರೆ.
ಬೇರೆ ದೇಶಗಳು ಪ್ರಾಣಿಹಿಂಸೆಯನ್ನು ನಿಷೇಧಿಸುತ್ತಿರುವಾಗ ಇಲ್ಲಿ ಕಂಬಳಕ್ಕೆ ಅನುಮತಿ ನೀಡಿದ್ದು ನಾಚಿಕೆಗೇಡು ಎಂದು ಪೇಟಾ ಅಭಿಪ್ರಾಯಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.