ಸೇನೆಗೆ ಅಲ್ ಖೈದಾ ಪಂಥಾಹ್ವಾನ: ಕಾಶ್ಮಿರವಾಗಲಿದೆಯಂತೆ ಸ್ಮಶಾನ!

Published : Jul 10, 2019, 02:17 PM IST
ಸೇನೆಗೆ ಅಲ್ ಖೈದಾ ಪಂಥಾಹ್ವಾನ: ಕಾಶ್ಮಿರವಾಗಲಿದೆಯಂತೆ ಸ್ಮಶಾನ!

ಸಾರಾಂಶ

ಕಾಶ್ಮೀರವನ್ನು ಸ್ಮಶಾನ ಮಾಡುವೆ ಎಂದ ಅಲ್ ಖೈದಾ ಮುಖ್ಯಸ್ಥ| ತಾಕತ್ತಿದ್ದರೆ ಅಲ್ ಖೈದಾ ಜೋಡಿ ಬಡಿದಾಡಿ ಎಂದ ಕುಖ್ಯಾತ ಉಗ್ರ| ಭಾರತೀಯ ಸೇನೆಗೆ ಪಂಥಾಹ್ವಾನ ನೀಡಿದ ಐಮಾನ್ ಅಲ್ ಜವಾಹರಿ| ಭಾರತ ಹಿಂದೆಂದೂ ಕಾಣದಷ್ಟು ರಕ್ತಪಾತಕ್ಕೆ ಸಾಕ್ಷಿಯಾಗಲಿದೆಯಂತೆ| 'ಕಾಶ್ಮೀರ ಹೋರಾಟ ಖಾಫಿರರ ವಿರುದ್ಧದ ಅಂತಾರಾಷ್ಟ್ರೀಯ ಮಟ್ಟದ ಹೋರಾಟದ ಭಾಗ'|

ನವದೆಹಲಿ(ಜು.10): ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಬಂಧನದಿಂದ ಮುಕ್ತಗೊಳಿಸಲು ಕಣಿವೆಯಲ್ಲಿ ಸಂಘಟನೆ ಸಕ್ರೀಯವಾಗಿದೆ ಎಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಐಮಾನ್ ಅಲ್ ಜವಾಹರಿ ಗುಡುಗಿದ್ದಾನೆ.

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಜವಾಹರಿ, ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಮುಜಾಹದೀನ್'ಗಳಿಗೆ ಅಲ್ ಖೈದಾ ಸೂಕ್ತ ತರಬೇತಿ ನೀಡುತ್ತಿದೆ ಎಂದು ಹೇಳಿದ್ದಾನೆ.

ಇದೇ ವೇಳೆ ಭಾರತ ಸರ್ಕಾರ ಮತ್ತು ಭಾರತೀಯ ಸೇನೆಗೆ ಪಂಥಾಹ್ವಾನ ನೀಡಿರುವ ಜವಾಹರಿ, ಕಾಶ್ಮೀರ ಬಿಡದಿದ್ದರೆ ಭಾರತ ಹಿಂದೆಂದೂ ಕಂಡಿರದಷ್ಟು ರಕ್ತಪಾತ ಕಾಣಲಿದೆ ಎಂದು ಎಚ್ಚರಿಸಿದ್ದಾನೆ.

ಇನ್ನು ಜವಾಹರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಳೆದ ಮೇನಲ್ಲಿ ಭಾರತೀಯ ಸೇನೆಯಿಂದ ಹತನಾಗಿದ್ದ ಅಲ್ ಖೈದಾದ ಭಾರತದ ಮುಖ್ಯಸ್ಥ ಜಾಕೀರ್ ಮುಸಾನ ಫೋಟೋ ಇದೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟ ಖಾಫಿರರ ವಿರುದ್ಧದ ಅಂತಾರಾಷ್ಟ್ರೀಯ ಮಟ್ಟದ ಹೋರಾಟದ ಭಾಗ ಎಂದು ಜವಾಹರಿ ಹೇಳಿದ್ದು, ಆಜಾದ್ ಕಾಶ್ಮೀರಕ್ಕಾಗಿ ಸಂಘಟನೆ ರಕ್ತಪಾತ ನಡೆಸಲು ಸರ್ವ ಸನ್ನದ್ಧವಾಗಿದೆ ಎಂದು ಗುಡುಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!