
ನವದೆಹಲಿ: ಕೃಷಿ ಉತ್ಪನ್ನಗಳಿಗೂ ಗರಿಷ್ಠ ಚಿಲ್ಲರೆ ಮಾರಾಟ ದರ ನಿಗದಿ ಮಾಡಬೇಕೆಂದು ಆರೆಸ್ಸೆಸ್ ನಂಟಿನ ಭಾರತೀಯ ಕಿಸಾನ್ ಸಂಘ ಕೇಂದ್ರವನ್ನು ಒತ್ತಾಯಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘಟನೆ ಅಧ್ಯಕ್ಷ ಮೋಹಿನಿ ಮೋಹನ ಮಿಶ್ರಾ, ರೈತ 1 ಕೆಜಿ ಟೊಮೆಟೊ ಅನ್ನು 5 ರು.ಗೆ ಮಾರಾಟ ಮಾಡುತ್ತಾನೆ. ಅದನ್ನು ಖರೀದಿಸಿದ ಮಂಡಿಯಾತ 30 ರು.ಗೆ ಮಾರುತ್ತಾನೆ.
ಅಂಗಡಿಯವ ಅದನ್ನು 50 ರು.ಗೆ ಗ್ರಾಹಕಗೆ ಮಾರುತ್ತಾನೆ. ಎಲ್ಲಾ ವಸ್ತುಗಳನ್ನು ಎಂಆರ್ ಪಿಗೆ ಖರೀದಿಸುವ ರೈತನಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಕೃಷಿ ಉತ್ಪನ್ನಕ್ಕೂ ಎಂಆರ್ಪಿ ನಿಗದಿ ಮಾಡಬೇಕು ಎಂದು ಮಿಶ್ರಾ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.