
ತಿರುವನಂತಪುರಂ(ಜ.05) : ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಭೇಟಿಗೆ ಬರುವ ಮಹಿಳಾ ಭಕ್ತರು ತಮ್ಮ ವಯಸ್ಸು ದೃಢೀಕರಿಸುವ ದಾಖಲೆ ತೋರಿಸುವುದು ಕಡ್ಡಾಯಗೊಳಿಸಲಾಗಿದೆ.
10-50ರ ನಡುವಿನ ಹರೆಯದ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿರುವ ಈ ದೇವಳದಲ್ಲಿ ನಿಯಮವನ್ನು ಉಲ್ಲಂಘಿಸಿ ಮಹಿಳೆಯರು ಬೆಟ್ಟ ಹತ್ತುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ತಿರುವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧಾರ ಕೈಗೊಂಡಿದೆ.
ಮೂರು ತಿಂಗಳ ವಾರ್ಷಿಕ ಯಾತ್ರಾ ಕಾರ್ಯಕ್ರಮ ಜ.14ರಂದು ಮಕರ ಬೆಳಕು ಉತ್ಸವದ ಬಳಿಕ ಕೊನೆಗೊಳ್ಳಲಿದೆ. ಅಯ್ಯಪ್ಪ ಸ್ವಾಮಿಯು ‘ಬ್ರಹ್ಮಚಾರಿ’ ಆಗಿರುವುದರಿಂದ ಮುಟ್ಟು ಆಗುವ ಸಾಧ್ಯತೆಯಿರುವ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ.
ಶಬರಿಮಲೆ ತಪ್ಪಲಿನಲ್ಲಿ ಸಾಮಾನ್ಯ ತಪಾಸಣೆಯ ವೇಳೆ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ಅಧಿಕೃತ ದೃಢೀಕರಣ ಪತ್ರ ಸ್ವೀಕರಿಸಲಾಗುವುದು ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.