370 ರದ್ದಾದ ಬೆನ್ನಲ್ಲೇ ಕಲಂ 371 ಚರ್ಚೆ: ಇತರೆ ರಾಜ್ಯಗಳಿಗೂ ನಡುಕ ಆರಂಭ!

Published : Aug 06, 2019, 09:27 AM ISTUpdated : Aug 06, 2019, 11:59 AM IST
370 ರದ್ದಾದ ಬೆನ್ನಲ್ಲೇ ಕಲಂ 371 ಚರ್ಚೆ: ಇತರೆ ರಾಜ್ಯಗಳಿಗೂ ನಡುಕ ಆರಂಭ!

ಸಾರಾಂಶ

ಇತರೆ ರಾಜ್ಯಗಳಿಗೂ ನಡುಕ ಆರಂಭ| 370 ರದ್ದಾದ ಬಳಿಕ ಕಲಂ-371 ಬಗ್ಗೆ ಚರ್ಚೆ| ಈಶಾನ್ಯ ಭಾಗದ ಹಲವು ರಾಜ್ಯಗಳು ಆದಿವಾಸಿ ಸಂಸ್ಕೃತಿಯನ್ನು ಉಳಿಸುವ ಭಾಗವಾಗಿ 371ನೇ ವಿಧಿಯಡಿ ವಿಶೇಷ ಮಾನ್ಯತೆ ಪಡೆದಿವೆ

ನವದೆಹಲಿ[ಆ.06]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾದ ಬಳಿಕ, ಕೆಲವು ರಾಜ್ಯಗಳಿಗೆ ಅದರಲ್ಲೂ ಈಶಾನ್ಯ ರಾಜ್ಯಗಳಿಗೆ ವಿಶೇಷ ಮಾನ್ಯತೆ ಕಲ್ಪಿಸಿರುವ 371ನೇ ವಿಧಿಯು ಗಮನ ಸೆಳೆಯುತ್ತಿದೆ. ಈಶಾನ್ಯ ಭಾಗದ ಹಲವು ರಾಜ್ಯಗಳು ಆದಿವಾಸಿ ಸಂಸ್ಕೃತಿಯನ್ನು ಉಳಿಸುವ ಭಾಗವಾಗಿ 371ನೇ ವಿಧಿಯಡಿ ವಿಶೇಷ ಮಾನ್ಯತೆ ಪಡೆದಿವೆ.

ನಾಗಾಗಳ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳು, ಅವರ ರೂಢಿಗತ ಕಾನೂನು ಮತ್ತು ಕಾರ್ಯವಿಧಾನ, ಮಾಲೀಕತ್ವ, ಭೂಮಿ ವರ್ಗಾವಣೆ ಮತ್ತು ಸಂಪತ್ತಿಗೆ ಸಂಬಂಧಿಸಿದ ಸಂಸತ್ತಿನ ಯಾವುದೇ ಕಾಯ್ದೆ ನಾಗಾಲ್ಯಾಂಡ್‌ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಆರ್ಟಿಕಲ್ 371ಎ ಹೇಳುತ್ತದೆ. ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆ ಪಡೆದ ನಂತರವಷ್ಟೇ ಅಂತಹ ಕಾಯ್ದೆ ರಾಜ್ಯದಲ್ಲಿ ಅನ್ವಯವಾಗುತ್ತದೆ. 371ಎ ರಾಜ್ಯದ ಭೂಮಿ ಮತ್ತು ಸಂಪತ್ತು ಅಲ್ಲಿನ ಜನರಿಗೆ ಸಂಬಂಧಿಸಿದ್ದೇ ವಿನಃ ಸರ್ಕಾರಕ್ಕಲ್ಲ ಎಂದು ಹೇಳುತ್ತದೆ. ಹೀಗಾಗಿ ಭೂಮಿ ಮಾಲೀಕರು ಸರ್ಕಾರದ ಅಭಿವೃದ್ಧಿ ಕಾರ‍್ಯಗಳಿಗೆ ಅಡ್ಡಿಪಡಿಸುತ್ತಾರೆ. ಇದು ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯುಂಟುಮಾಡುತ್ತಿದೆ ಎಂದು ಇತ್ತೀಚೆಗೆ ನ್ಯಾಷನಲ್‌ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿ (ಎನ್‌ಡಿಪಿಪಿ) ಅಸಮಾಧಾನ ವ್ಯಕ್ತಪಡಿಸಿತ್ತು.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದೇ ರೀತಿ ಮಿಜೋರಂಗೆ 371ಜಿ ವಿಶೇಷ ಮಾನ್ಯತೆ ನೀಡಿದೆ. 371ಸಿ, 1972ರಲ್ಲಿ ರಚನೆಯಾಗಿರುವ ಮಣಿಪುರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. 371ಎಫ್‌ ಮತ್ತು 371ಎಚ್‌ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿವೆ. ಇನ್ನು ಆಂಧ್ರಪ್ರದೇಶ, ಕರ್ನಾಟಕ ಮತ್ತು ಗೋವಾದಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ 371ಡಿ, 371ಇ, 371ಜೆ, 371ಐ ಅಡಿ ವಿಶೇಷ ಮೀಸಲಾತಿಗೆ ಅವಕಾಶ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು