
ನವದೆಹಲಿ (ಸೆ.01): ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ರೋಹ್ಟಕ್ ಸುನಾರಿಯಾ ಜೈಲಿನಲ್ಲಿ 5 ದಿನಗಳನ್ನು ಕಳೆದಿದ್ದು ಅಲ್ಲಿ ಇರಲಿಕ್ಕಾಗದೇ ಕಣ್ಣೀರು ಹಾಕಿದ್ದಾರೆ. 'ನನ್ನನ್ನು ಗಲ್ಲಿಗೆ ಹಾಕಿ, ನನಗೆ ಬದುಕಲು ಇಷ್ಟವಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.
ಅತ್ಯಾಚಾರ ಆರೋಪದಡಿಯಲ್ಲಿ ಗುರ್ಮೀತ್ ರಾಮ್ ರಹೀಮ್’ಗೆ ಆ.28 ರಂದು ಸಿಬಿಐ ನ್ಯಾಯಾಲಯ 20 ವರ್ಷಗಳ ಜೈಲುಶಿಕ್ಷೆ ಹಾಗೂ 30 ಲಕ್ಷ ದಂಡವನ್ನು ವಿಧಿಸಿತ್ತು. ಶಿಕ್ಷೆ ಪ್ರಕಟವಾದ ಬಳಿಕ ಗುರ್ಮೀತ್ ಸಿಂಗ್ ಕೋರ್ಟ್ ಆವರಣದಲ್ಲಿಯೇ ಗಳಗಳನೇ ಅತ್ತರು.
ಗುರ್ಮೀತ್ ಸಿಂಗ್ ಜೊತೆ ಐದು ದಿನಗಳ ಕಾಲ ಜೊತೆಗಿದ್ದು ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಸ್ವದೇಶ್ ಕಿರಾದ್ ಹೇಳುವ ಪ್ರಕಾರ; ಬಾಬಾರವರು ಇಡೀ ರಾತ್ರಿ ನಿದ್ದೆ ಮಾಡಿಲ್ಲ. ಓ ದೇವರೇ ನಾನೇನು ತಪ್ಪು ಮಾಡಿದ್ದೇನೆ ಎಂದು ಗುನುಗುನಿಸುತ್ತಿದ್ದರು. ಅವರಿಗೆ ವಿಶೇಷ ಆತಿಥ್ಯವನ್ನೇನು ನೀಡಿಲ್ಲ. ಅವರು 5 ದಿನಗಳ ಕಾಲ ನನ್ನು ತಿಂದಿಲ್ಲ, ಕೇವಲ ಹಾಲು,ಟೀ ಮತ್ತು ಬಿಸ್ಕೇಟ್’ನಲ್ಲಿಯೇ ಇದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.