ಮಹತ್ವದ ನಿರ್ಧಾರವೊಂದರಿಂದ ಹಿಂದೆ ಸರಿದ ಕೇಂದ್ರ : ರೈತರ ಆದಾಯಕ್ಕೆ ಬೀಳುತ್ತಾ ಕತ್ತರಿ

Published : Jul 02, 2018, 08:13 AM IST
ಮಹತ್ವದ ನಿರ್ಧಾರವೊಂದರಿಂದ ಹಿಂದೆ ಸರಿದ ಕೇಂದ್ರ : ರೈತರ ಆದಾಯಕ್ಕೆ ಬೀಳುತ್ತಾ ಕತ್ತರಿ

ಸಾರಾಂಶ

ಜೈನ ಸಮುದಾಯದ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಈ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದೆ.  ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ಕ್ಕೆ ಕುರಿ ಮತ್ತು ಆಡುಗಳನ್ನು ರಪ್ತು ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. 

ನಾಗ್ಪುರ: ಜೈನ ಸಮುದಾಯದ ವಿರೋಧದ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ಕ್ಕೆ ಕುರಿ ಮತ್ತು ಆಡುಗಳನ್ನು ರಪ್ತು ಮಾಡುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. 

ರೈತರ ಆದಾಯ ಹೆಚ್ಚಳ ಮತ್ತು ಸ್ವ ಉದ್ಯೋಗ ಸೃಷ್ಟಿಸುವ ನಿಟ್ಟಿನಿಂದ ನಾಗ್ಪುರ ವಿಮಾನ ನಿಲ್ದಾಣದಿಂದ ಯುಎಇಗೆ ಶನಿವಾರ 2,000 ಕುರಿ ಮತ್ತು ಆಡು ಸಾಗಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಯೋಜಿಸಲಾಗಿತ್ತು. 

ಆದರೆ, ಈ ಕ್ರಮ ವಿರೋಧಿಸಿ ಜೈನ ಸಮುದಾಯದ ಮುಖಂಡರು ಆರ್‌ಎಸ್‌ಎಸ್‌ ಮುಖ್ಯಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಜೊತೆ ಮಾತುಕತೆ ಬಳಿಕ ರಫ್ತನ್ನು ಅನಿರ್ದಿಷ್ಟಅವಧಿಗೆ ಮುಂದೂಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪರಿಷತ್‌ನಲ್ಲಿ ಮಧುಗೆ ಮೆಚ್ಚುಗೆ: 'ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?' ಕಾಲೆಳೆದ ಸಿಟಿ ರವಿ!
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!