ಅಮಿತ್ ಶಾಗೆ ಊಟ ಬಡಿಸಿ ಟಿಎಂಸಿ ಸೇರಿದ ದಂಪತಿಗಳು!

Published : May 03, 2017, 05:18 AM ISTUpdated : Apr 11, 2018, 12:48 PM IST
ಅಮಿತ್ ಶಾಗೆ ಊಟ ಬಡಿಸಿ ಟಿಎಂಸಿ ಸೇರಿದ ದಂಪತಿಗಳು!

ಸಾರಾಂಶ

ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿದ್ದ ಈ ದಂಪತಿಗಳು ಇಂದು ಅಮಿತ್ ಶಾರವರ ರಾಜಕೀಯ ಕಟ್ಟಾ ವಿರೋಧಿ ಮಮತಾ ಬ್ಯಾನರ್ಜಿಯವರ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದಾರೆ.

ನವದೆಹಲಿ (ಮೇ.03): ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿದ್ದ ಈ ದಂಪತಿಗಳು ಇಂದು ಅಮಿತ್ ಶಾರವರ ರಾಜಕೀಯ ಕಟ್ಟಾ ವಿರೋಧಿ ಮಮತಾ ಬ್ಯಾನರ್ಜಿಯವರ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯ ಪ್ರವಾಸೋದ್ಯಮ ಸಚಿವ ಗುಲಾಂ ನಬಿ ಆಜಾದ್ ಗೀತಾ ಮತ್ತು ಮಹಲಿ ದಂಪತಿಗಳನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದಾರೆ.

ಕಳೆದ ವಾರ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಹಲಿ ದಂಪತಿಗಳ ಮನೆಯಲ್ಲಿ ಮಧ್ಯಾಹ್ನ ಊಟಕ್ಕೆ ತಂಗಿದ್ದರು. ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆಎಲೆಯಲ್ಲಿ ಊಟ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕೂಡಾ ಅಮಿತ್ ಶಾಗೆ ಸಾಥ್ ನೀಡಿದರು. ಆ ದಂಪತಿಗಳ ಜೊತೆ ಸೆಲ್ಫಿಯನ್ನೂ ತೆಗೆದುಕೊಂಡರು.

ಇದೀಗ ಗೀತಾ ಮಹಲಿ ದಂಪತಿಗಳು ಟಿಎಂಸಿ ಸೇರಿರುವುದನ್ನು ಅಲ್ಲಗಳೆಯುತ್ತಾ, ಅವರನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ತೃಣಮೂಲ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ನಮ್ಮನ್ನು ಹೆದರಿಸಿಲ್ಲ. ಹಣದ ಅಥವಾ ಇನ್ಯಾವುದೇ ಆಮಿಷವೊಡ್ಡಿಲ್ಲ. ನಮಗೆ ಮಮತಾ ಬ್ಯಾನರ್ಜಿಯೆಂದರೆ ಇಷ್ಟ ಹಾಗಾಗಿ ತೃಣಮೂಲ ಕಾಂಗ್ರೆಸ್ ಸೇರಿದ್ದೇವೆ ಎಂದು ಗೀತಾ ಮಹಲಿ ಹೇಳಿದ್ದಾರೆ.

ಅಮಿತ್ ಶಾಗೆ ಊಟ ಏರ್ಪಡಿಸಿದಂತೆ ಮಮತಾ ಬ್ಯಾನರ್ಜಿಯವರಿಗೂ ಊಟ ಏರ್ಪಡಿಸುತ್ತೀರಾ ಎಂದು ಮಹಲಿಯವರನ್ನು ಕೇಳಿದಾಗ, ಮೊದಲು ತಡವರಿಸಿದರೂ, ನಂತರ ಅವರು ಬಂದರೆ ಖಂಡಿತ ಊಟ ಹಾಕುತ್ತೇವೆ ಎಂದರು.

ವರದಿ: ಎನ್ 'ಡಿಟಿವಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ನಿರಾಕರಣೆ: ಯುವತಿ ತಾಯಿಯ ಜೀವಕ್ಕೆ ಕುತ್ತು ತಂದ ದುರುಳ!
ರೈಲಲ್ಲಿ ಬ್ಯಾಗ್‌ ಮರೆವವರ ನೆರವಿಗೆ 'ಆಪರೇಷನ್‌ ಅಮಾನತ್‌': 2.25 ಕೋಟಿ ಮೌಲ್ಯದ ವಸ್ತುಗಳನ್ನು ರಕ್ಷಿಸಿದ ಆರ್‌ಪಿಎಫ್‌