ವಿಧಾನಸಭೆಯಲ್ಲಿ ಬೀಫ್ ಪೇ ಚರ್ಚಾ: ಗೋಮಾಂಸ ಸೇವಿಸುತ್ತಾ ಚರ್ಚೆ ನಡೆಸಿದ ಶಾಸಕರು

Published : Jun 08, 2017, 04:09 PM ISTUpdated : Apr 11, 2018, 12:40 PM IST
ವಿಧಾನಸಭೆಯಲ್ಲಿ ಬೀಫ್ ಪೇ ಚರ್ಚಾ: ಗೋಮಾಂಸ ಸೇವಿಸುತ್ತಾ ಚರ್ಚೆ ನಡೆಸಿದ ಶಾಸಕರು

ಸಾರಾಂಶ

ಕೇಂದ್ರ ಸರ್ಕಾರ ಹೊರಡಿಸಿದ ಗೋಹತ್ಯೆ ನಿಷೇಧ ಅಧಿಸೂಚನೆ ವಿರುದ್ಧ ಕೇರಳದಲ್ಲಿ ಭಾರೀ ಪ್ರತಿಭಟನೆಯಾಗುತ್ತಿದೆ. ಕೇರಳ ವಿಧಾನಸಭೆಯಲ್ಲಿಂದು ಬಿಸಿಬಿಸಿಯಾದ ಬೀಫ್ ಫ್ರೈ ತಿನ್ನುವುದರ ಮೂಲಕ ಚರ್ಚೆ ಪ್ರಾರಂಭಿಸಲಾಗಿದೆ.

ನವದೆಹಲಿ (ಜೂ.08): ಕೇಂದ್ರ ಸರ್ಕಾರ ಹೊರಡಿಸಿದ ಗೋಹತ್ಯೆ ನಿಷೇಧ ಅಧಿಸೂಚನೆ ವಿರುದ್ಧ ಕೇರಳದಲ್ಲಿ ಭಾರೀ ಪ್ರತಿಭಟನೆಯಾಗುತ್ತಿದೆ. ಕೇರಳ ವಿಧಾನಸಭೆಯಲ್ಲಿಂದು ಬಿಸಿಬಿಸಿಯಾದ ಬೀಫ್ ಫ್ರೈ ತಿನ್ನುವುದರ ಮೂಲಕ ಚರ್ಚೆ ಪ್ರಾರಂಭಿಸಲಾಗಿದೆ.

ಕೇರಳ ವಿಧಾನಸಭೆಯಲ್ಲಿ ಪ್ರತಿದಿನ 11 ಗಂಟೆಗೆ ಬೀಫ್ ನೀಡಲಾಗುತ್ತದೆ. ಆದರೆ ಇವತ್ತು ಇದೇ ವಿಚಾರವಾಗಿ ಚರ್ಚೆಯಿದ್ದಿದ್ದರಿಂದ 10 ಕೆಜಿ ಬೀಫನ್ನು ಬೆಳಿಗ್ಗೆಯೇ ತರಲಾಗಿತ್ತು. ಸದನದಲ್ಲಿ ಚರ್ಚೆ ಆರಂಭವಾಗುವುದಕ್ಕೂ ಮುನ್ನ ಶಾಸಕರು ಬೀಫನ್ನು ಉಪಾಹಾರವಾಗಿ ಸೇವಿಸಿದರು ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳಿದ್ದಾರೆ.  

ವಿಧಾನಸಭೆಯಲ್ಲಿ ಚರ್ಚೆಯ ಅವಧಿಯಲ್ಲಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಗೋಹತ್ಯೆ ನಿಷೇಧದ ವಿರುದ್ಧ ಗೊತ್ತುವಳಿ ಮಂಡಿಸಿದರು. ಕೇಂದ್ರ ಸರ್ಕಾರದ ಹೊಸ ನಿಯಮದಿಂದ  ಏನನ್ನು ತಿನ್ನಬೇಕು ಎನ್ನುವ ಜನರ ವೈಯಕ್ತಿಕ ಆಯ್ಕೆಯ ಉಲ್ಲಂಘಿಸಿದಂತಾಗುತ್ತದೆ. ಕೇರಳ ಸೇರಿದಂತೆ ದೇಶದೆಲ್ಲೆಡೆ ಕೃಷಿಕ ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತದೆ ಎಂದು ಪಿನರಾಯಿ ವಿಜಯನ್ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?