ಶೇ.74 ಬಂದರೂ ಕಡಿಮೆ ಅಂಕವೆಂದು ಆತ್ಮಹತ್ಯೆ! ?

Published : May 01, 2018, 10:35 AM ISTUpdated : May 01, 2018, 10:38 AM IST
ಶೇ.74 ಬಂದರೂ ಕಡಿಮೆ ಅಂಕವೆಂದು ಆತ್ಮಹತ್ಯೆ! ?

ಸಾರಾಂಶ

ತೇಜಸ್ ಅವರ ತಂದೆ ಕೃಷಿಕರಾಗಿದ್ದು, ಕುಟುಂಬ ಸುಗ್ಗಟ ದಲ್ಲಿ ನೆಲೆಸಿ ದೆ. ತೇಜಸ್ ವಿದ್ಯಾರಣ್ಯಪುರದ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೇಜಸ್ ಪಿಯುಸಿ ಫಲಿತಾಂಶ ನೋಡಿದು, ಶೇ.74ರಷ್ಟು ಅಂಕ ಪಡೆದಿದ್ದ. ತಾನು ಶೇ.90ರಷ್ಟು ಅಂಕವನ್ನು  ನಿರೀಕ್ಷೆ ಮಾಡಿದೆ. ಆದರೆ ಅದಕ್ಕಿಂತ ಕಡಿಮೆ ಅಂಕ ಬಂದಿ ದೆ ಎಂ ದು ಪೋಷಕರ ಬಳಿ  ಬೇಸರ ವ್ಯಕ್ತಪಡಿಸಿದ.

ಬೆಂಗಳೂರು(ಮೇ.1): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೭೪ರಷ್ಟು ಅಂಕ ಪಡೆ ದರೂ ತಾನು  ನಿರೀಕ್ಷಿಸಿ ದಕ್ಕಿಂತ ಕಡಿಮೆ ಅಂಕ ಬಂದಿದೆ ಎಂದು ನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲ ಸಮೀಪ ದ ಸುಗ್ಗಟ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಸುಗ್ಗಟ  ನಿವಾಸಿ ರವಿಕುಮಾರ್ ಅವರ ಪುತ್ರ ತೇಜಸ್ ಗೌಡ (17) ಆತ್ಮಹತ್ಯೆ ಮಾಡಿಕೊಂಡವರು.ತೇಜಸ್ ಅವರ ತಂದೆ ಕೃಷಿಕರಾಗಿದ್ದು, ಕುಟುಂಬ ಸುಗ್ಗಟ ದಲ್ಲಿ ನೆಲೆಸಿ ದೆ. ತೇಜಸ್ ವಿದ್ಯಾರಣ್ಯಪುರದ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ.ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೇಜಸ್ ಪಿಯುಸಿ ಫಲಿತಾಂಶ ನೋಡಿದು, ಶೇ.74ರಷ್ಟು ಅಂಕ ಪಡೆದಿದ್ದ. ತಾನು ಶೇ.90ರಷ್ಟು ಅಂಕವನ್ನು  ನಿರೀಕ್ಷೆ ಮಾಡಿದೆ. ಆದರೆ ಅದಕ್ಕಿಂತ ಕಡಿಮೆ ಅಂಕ ಬಂದಿ ದೆ ಎಂ ದು ಪೋಷಕರ ಬಳಿ  ಬೇಸರ ವ್ಯಕ್ತಪಡಿಸಿದ್ದ.
ತೇಜಸ್ ತಂದೆ ರವಿಕುಮಾರ್  ಪುತ್ರನಿಗೆ ಧೈರ್ಯ ತುಂಬಿದಲ್ಲದೆ, ಉತ್ತಮವಾದ ಅಂಕ ಬಂದಿದೆ ಎಂದು ಸಮಾಧಾನಪಡಿಸಿದರು. ಆದರೂ ತೇಜಸ್  ಬೇಸರದಲ್ಲಿಯೇ ಇದ್ದ. ಈ ವೇಳೆ ಮನೆಯಲ್ಲಿ ಎಲ್ಲರೂ ಟಿ.ವಿ. ವೀಕ್ಷಿಸುತ್ತಿದರು. ತೇಜಸ್ ಮಧ್ಯಾಹ್ನ 1.45 ರ ಸುಮಾರಿಗೆ ತನ್ನ ಕೊಠಡಿಗೆ ತೆರಳಿದ. ಕೊಠಡಿಗೆ ತೆರಳಿದ ಪುತ್ರ ಒಂದು ಗಂಟೆಯಾದರೂ ಹೊರಗೆ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು  ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ