ಅನೈತಿಕ ಸಂಬಂಧದ ಪಾಶಕ್ಕೆ ಮಹಿಳೆ ಬಲಿ.. ಬೆಳ್ಳಂ ಬೆಳಗ್ಗೆ ಬರ್ಬರ ಹತ್ಯೆ

Published : Nov 21, 2016, 12:19 PM ISTUpdated : Apr 11, 2018, 12:39 PM IST
ಅನೈತಿಕ ಸಂಬಂಧದ ಪಾಶಕ್ಕೆ ಮಹಿಳೆ ಬಲಿ.. ಬೆಳ್ಳಂ ಬೆಳಗ್ಗೆ ಬರ್ಬರ ಹತ್ಯೆ

ಸಾರಾಂಶ

ಬೆಳಗ್ಗೆ 8.30ರ ಸುಮಾರಿಗೆ ಬೈಕ್`ನಲ್ಲಿ ಮನೆಯ ಬಳಿ ಬಂದ ಯುವಕ ಮನೆಗೆ ನುಗ್ಗಿ ಏಕಾಏಕಿ ಕತ್ತು ಕತ್ತರಿಸಿ ಪರಾರಿಯಾಗಿದ್ದಾನೆ.  ಆರೋಪಿಯನ್ನು ಬೇಗೂರು ರವಿ ಎಂದು ಹೇಳಲಾಗುತ್ತಿದೆ.

ಮೈಸೂರು(ನ.21): ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಉಪ್ಪಾರಗೆರಿಯಲ್ಲಿ ನಡೆದಿದೆ. 30 ವರ್ಷದ ಮಂಗಳ ಎಂಬ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಳಗ್ಗೆ 8.30ರ ಸುಮಾರಿಗೆ ಬೈಕ್`ನಲ್ಲಿ ಮನೆಯ ಬಳಿ ಬಂದ ಯುವಕ ಮನೆಗೆ ನುಗ್ಗಿ ಏಕಾಏಕಿ ಕತ್ತು ಕತ್ತರಿಸಿ ಪರಾರಿಯಾಗಿದ್ದಾನೆ.  ಆರೋಪಿಯನ್ನು ಬೇಗೂರು ರವಿ ಎಂದು ಹೇಳಲಾಗುತ್ತಿದೆ.

ಪಿರಿಯಾಪಟ್ಟಣದ ಶಿವು ಎಂಬುವರನ್ನು ಮದುವೆಯಾಗಿದ್ದ ಮಂಗಳ, ರವಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ ಮೂರು ತಿಂಗಳಿಂದ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಇದ್ದ ಈಕೆ, ಕಳೆದ ಕೆಲವು ದಿನಗಳಿಂದ ಮತ್ತೆ ಗಂಡನ ಮನೆ ಸೇರಿಕೊಂಡಿದ್ದಳು. ಇದರಿಂದ ಕುಪಿತನಾದ ರವಿ ಈ  ಕೃತ್ಯ ಎಸಗಿದ್ದಾನೆ.  ಅಮ್ಮನ ಕೊಲೆಯನ್ನ ಕಣ್ನಾರೆ ಕಂಡ ಮಗಳು  ಕೂಗಿಕೊಂಡಡಾಗ ನೆರೆಹೊರೆಯವರು ಆಗಮಿಸಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೋಲಿಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು