ಸಿಎಂ ಕಮಲ್‌ ಪುತ್ರಗೆ ನೀಡಿದ್ದ ಜಮೀನು ರದ್ದು ಮಾಡಿದ ಸಿಎಂ ಯೋಗಿ!

Published : May 29, 2019, 09:14 AM IST
ಸಿಎಂ ಕಮಲ್‌ ಪುತ್ರಗೆ ನೀಡಿದ್ದ ಜಮೀನು ರದ್ದು ಮಾಡಿದ ಸಿಎಂ ಯೋಗಿ!

ಸಾರಾಂಶ

ಸಿಎಂ ಕಮಲ್‌ ಪುತ್ರಗೆ ನೀಡಿದ್ದ ಜಮೀನು ರದ್ದು ಮಾಡಿದ ಸಿಎಂ ಯೋಗಿ|  ಬಿಜೆಪಿ ಕಾರ್ಪೊರೇಟರ್‌ ರಾಜೇಂದ್ರ ತ್ಯಾಗಿ ಎಂಬವರಿಂದ ದೂರು

ಘಾಜಿಯಾಬಾದ್‌[ಮೇ.29]: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಪುತ್ರ ಬುಕುಲ್‌ನಾಥ್‌ ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ನೀಡಿದ್ದ ಕೋಟ್ಯಂತರ ರು.ಮೌಲ್ಯದ ಭೂಮಿಯನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಕೈಗೊಂಡಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಟೆಕ್ನಾಲಜಿ(ಐಎಂಟಿ) ಶಿಕ್ಷಣ ಸಂಸ್ಥೆಗೆ ನಗರ ವ್ಯಾಪ್ತಿಯಲ್ಲೇ ಇದ್ದ ನೂರಾರು ಕೋಟಿ ರು. ಬೆಲೆಬಾಳುವ 10,841 ಸ್ಕ್ವೇರ್‌ ಮೀಟರ್‌ ಭೂಮಿ ಮಂಜೂರು ಮಾಡಲಾಗಿತ್ತು. ಈ ಸಂಬಂಧ ಬಿಜೆಪಿ ಕಾರ್ಪೊರೇಟರ್‌ ರಾಜೇಂದ್ರ ತ್ಯಾಗಿ ಎಂಬವರು ದೂರು ನೀಡಿದ್ದರು.

ಇದನ್ನು ಪರಿಶೀಲಿಸಿದ ಉತ್ತರಪ್ರದೇಶ ಸರ್ಕಾರ ಮಂಜೂರು ಆದೇಶವನ್ನು ರದ್ದುಗೊಳಿಸಿಸುವಂತೆ ಘಾಜಿಯಾಬಾದ್‌ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಈಗಾಗಲೇ ಈ ಸ್ಥಳದಲ್ಲಿ ನಿರ್ಮಿಸಲಾದ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶದಲ್ಲಿ ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು