
ಮುಂಬೈ (ನ.12); ದೇಶದಲ್ಲಿ 500, 1000 ರೂಪಾಯಿ ನೋಟುಗಳು ಚಲಾವಣೆ ರದ್ದಾದ ಹಿನ್ನೆಲೆಯಲ್ಲಿ ಹಲವರು ಬಚ್ಚಿಟ್ಟ ಅಪಾರ ಹಣ ಕಪ್ಪುಹಣ ನಿರುಪಯುಕ್ತವಾಗುತ್ತಿದೆ. ಹೀಗಾಗಿ ಕೆಲವರು ಆ ಹಣವನ್ನು ಸುಡುವ, ಬೀಸಾಡುವ ಕೆಲಸ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಯಾಂಡಲ್’ವುಡ್ ಹಾಗೂ ಬಾಲಿವುಡ್ ನಟಿ ಪೂಜಾ ಹೆಗ್ಡೆ ಪ್ರಧಾನಿ ಮೋದಿಯವರಿಗೆ ಒಂದು ಸಲಹೆ ನೀಡಿದ್ದಾರೆ.
500, 1000 ರೂಪಾಯಿ ನೋಟುಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಡೋನೇಷನ್ ಆಗಿ ನೀಡಲು 2017ರ ಮಾರ್ಚ್ಗೆ ಅವಕಾಶ ಕಲ್ಪಿಸಬೇಕು ಎಂದು ಪೂಜಾ ಹೆಗ್ಡೆ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಆಗ ಕಪ್ಪುಹಣವುಳ್ಳವರು ನೋಟಿನ ಕಂತೆಯನ್ನು ನಿರುಪಯುಕ್ತವಾಗಿ ಬೀಸಾಡುವ ಬದಲಿಗೆ ಆಸ್ಪತ್ರೆಗಳಿಗೆ ದಾನ ಮಾಡುವ ಸಾಧ್ಯತೆ ಇದೆ. ಅದರಿಂದ ಆರೋಗ್ಯ ಭದ್ರತೆ ಹೆಚ್ಚುತ್ತೆ ಎಂದು ಪೂಜಾ ಹೆಗ್ಡೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.