
ಬೆಂಗಳೂರು (ಆ.06): ವೆಂಕಯ್ಯ ನಾಯ್ಡು ದೇಶದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸ್ಯಾಂಡಲ್ವುಡ್ ನಟ ಜಗ್ಗೇಶ್ ವಿವಾದಾತ್ಮಕ ಟ್ವೀಟೊಂದನ್ನ ಮಾಡಿದ್ದಾರೆ. ವೆಂಕಯ್ಯ ನಾಯ್ಡು ಅವರನ್ನು ಭಾಷಾ ಭಾವನೆಯಿಂದ ರಾಜ್ಯಸಭೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರಿಂದು ಅವರೇ ದೇಶಕ್ಕೆ ಉಪರಾಷ್ಟ್ರಪತಿಯಾಗಿದ್ದಾರೆ ಎಂದು ಹೇಳುತ್ತಾ ಬಾರದು ಬಪ್ಪುದು, ಬಪ್ಪುದು ತಪ್ಪದು, ಇದೇ ದೇವರ ಲೀಲೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಜಗ್ಗೇಶ್ ಟ್ವೀಟ್ಗೆ ಹಲವರು ವಿರೋಧ ವ್ಯಕ್ತಪಡಿಸಿದಾಗ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ನಟ ಜಗ್ಗೇಶ್ ಟ್ವೀಟ್ಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇನ್ನು ನವರಸ ನಾಯಕ ಜಗ್ಗೇಶ್ ಈಗ ಹುಚ್ಚಾ ವೆಂಕಟ್ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಫೈರಿಂಗ್ ಸ್ಟಾರ್ ಅಂತಲೇ ಕರೆಸಿಕೊಳ್ಳುವ ಹುಚ್ಚಾವೆಂಕಟ್, ಜಗ್ಗೇಶ್ ಅವರನ್ನ ಕಠುವಾಗಿಯೇ ಟೀಕಿಸಿದ್ದಾರೆ. ಇಷ್ಟೇ ಅಲ್ಲ, ಸಿನಿಮಾ ಮಾಡಿ ಇಲ್ಲವೇ ರಾಜಕೀಯ ಮಾಡಿ.ಆದರೆ, ಕನ್ನಡಿಗರನ್ನ ಅಪಮಾನ ಮಾಡಬೇಡಿ. ನೀವೂ ಕನ್ನಡಿಗರೇ ಅನ್ನೋದನ್ನ ಮರಿಬೇಡಿ ಅಂತಲೂ ಎಚ್ಚರಿಸಿದ್ದಾರೆ. ನೀರ್ ದೋಸೆ'ಯಂತ ಸಿನಿಮಾ ಮಾಡಿದ್ದೀರಿ. ಫ್ಯಾಮಿಲಿ ಕೂತು ನೋಡೋ ಚಿತ್ರವೇ ಇದೂ ಅಂತಲೂ ತಮ್ಮದೇ ದಾಟಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.